Site icon Suddi Belthangady

ಟೈಲರ್ಸ್ ಅಸೋಸಿಯೇಷನ್ ಬೆಳ್ತಂಗಡಿ ಕ್ಷೇತ್ರ ಸಮಿತಿ ಸಮಾಲೋಚನಾ ಸಭೆ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಆ.6 ರಂದು ನಡೆಯಲಿರುವ ಬೆಳ್ತಂಗಡಿ ಕ್ಷೇತ್ರ ಸಮಿತಿಯ ಮಹಾಸಭೆ ಮತ್ತು ಆಟಿಡೊಂಜಿ ದಿನ, ಚೆನ್ನೆ ಮನೆ ಗೊಬ್ಬು. ಕಾರ್ಯಕ್ರಮದ ಪೂರ್ವಭಾವಿ ಸಭೆ ಜು.26 ರಂದು ಅಕ್ಷ ಲೇಡಿಸ್ ಟೈಲರ್ ನಲ್ಲಿ ನಡೆಯಿತು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಜೊತೆ ಕಾರ್ಯದರ್ಶಿ ಕುಶಾಲಪ್ಪ ಗೌಡ, ಜಿಲ್ಲಾ ಸಮಿತಿಯ ಸದಸ್ಯರಾದ ವಸಂತ ಏನ್, ಶಂಭಾವಿ ಪಿ. ಬಂಗೇರ, ವಸಂತ ಪೂಜಾರಿ, ಬೆಳ್ತಂಗಡಿ ಕ್ಷೇತ್ರದ ಅಧ್ಯಕ್ಷೆ ವೇದಾವತಿ ಜನಾರ್ಧನ್, ಕಾರ್ಯದರ್ಶಿ ನಾಗೇಶ್ ಕುಮಾರ್, ಕೋಶಾಧಿಕಾರಿ ಜಯಾ ಚಿದಾನಂದ್, ಬೆಳ್ತಂಗಡಿ ವಲಯದ ಅಧ್ಯಕ್ಷರಾದ ಸುರೇಂದ್ರ ಕೋಟ್ಯಾನ್, ಉಜಿರೆ ವಲಯದ ಅಧ್ಯಕ್ಷರಾದ ರೂಪ ಜಗದೀಶ್, ಗೇರುಕಟ್ಟೆ ವಲಯದ ನಿಕಟಪೂರ್ವ ಅಧ್ಯಕ್ಷ ರವೀಂದ್ರ, ಗೇರುಕಟ್ಟೆ ವಲಯದ ಕೋಶಾಧಿಕಾರಿ ರಮೇಶ್ ಪ್ರಭು ಮುಂತಾದವರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಯಿತು.

Exit mobile version