Site icon Suddi Belthangady

ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪರಿಷತ್ ನಿಂದ ಗೋವಿಗಾಗಿ ಮೇವು ಧನ ಸಹಾಯ ಹಸ್ತಾಂತರ

ಗುಂಡೂರಿ: ಅಖಿಲ ಕರ್ನಾಟಕ ಬ್ರಾಹ್ಣಣ ಅರ್ಚಕ ಮತ್ತು ಪುರೋಹಿತರ ಪರಿಷತ್ ಬೆಂಗಳೂರು,ದ.ಕ ಜಿಲ್ಲೆ .ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗೋವಿಗಾಗಿ ಮೇವು ಕಾರ್ಯಕ್ರಮದ ಅಂಗವಾಗಿ ಸದಸ್ಯರಿಂದ ಸಂಗ್ರಹವಾದ ರೂಪಾಯಿ 15,000 ಹಾಗೂ ಭಕ್ತರೊಬ್ಬರು ನೀಡಿದ 66 ಕಿಲೋ ಬೆಲ್ಲವನ್ನು ಗೊಗ್ರಾಸವಾಗಿ ಗುಂಡೂರಿ ಗೋಶಾಲೆಗೆ ಹಸ್ತಾಂತರ ಮಾಡಿದರು.

ಈ ಸೇವಾ ಕಾರ್ಯದಲ್ಲಿ ತಾಲೂಕು ಅಧ್ಯಕ್ಷ ರವಿಕುಮಾರ್ ಭಟ್ ಪಜಿರಡ್ಕ, ಕಾರ್ಯದರ್ಶಿ ಕೃಷ್ಣ ಕುಮಾರ್ ಐತಾಳ ಪಂಜಿರ್ಪು, ಖಜಾಂಚಿ ರಾಜೇಶ್ ಹೊಳ್ಳ, ವೇಣೂರು ವಲಯ ನಿರ್ದೇಶಕ ಸುದೀಪ್ ಪಟವರ್ಧನ್, ರಾಧಾಕೃಷ್ಣ ಹೊಳ್ಳ ಸುರಿಯ ಉಪಸ್ಥಿತರಿದ್ದರು.

Exit mobile version