Site icon Suddi Belthangady

ವಿಧಾನಸಭಾ ಅಧಿವೇಶನದಲ್ಲಿ ಗಮನ ಸೆಳೆದ ಶಾಸಕ ಅಶೋಕ್ ರೈಯವರಿಗೆ ಅಭಿನಂದನೆ

ಬೆಳ್ತಂಗಡಿ: ವಿಧಾನಸಭೆಯ ಅಧಿವೇಶನದಲ್ಲಿ ಬೆನ್ನುಹುರಿ ಅಪಘಾತಗೊಂಡವರ ಕಷ್ಟಗಳನ್ನು ತಿಳಿಸಿ ಗಮನ ಸೆಳೆದ ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಎಲ್ಲಾ ಬೆನ್ನುಹುರಿ ಅಪಘಾತಗೊಂಡವರ ಪರವಾಗಿ ಮುಖತಃ ಭೇಟಿ ಮಾಡಿ ಅಭಿನಂದಿಸಲಾಯಿತು.ಮತ್ತು ನಮ್ಮ ಮುಂದಿನ ಕಾರ್ಯಕ್ರಮಗಳಲ್ಲಿ ಸಹಕಾರ ಕೊಡುವಂತೆ ವಿನಂತಿಸಲಾಯಿತು.

ನವೆಂಬರ್ ನಲ್ಲಿ ನಡೆಯುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ದಿವ್ಯಾಂಗರ ಸರ್ವತೋಮುಖ ಅಭಿವೃದ್ಧಿಗೆ ಸರಕಾರವನ್ನು ಒತ್ತಾಯ ಮಾಡುವಂತೆ ವಿನಂತಿಸಿರುವುದಕ್ಕೆ ಶಾಸಕರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಬೆಳ್ತಂಗಡಿಯ ಬಾಲಕೃಷ್ಣ, ವಿನಾಯಕ ರಾವ್ ಕನ್ಯಾಡಿ ಮತ್ತು ಚರಣ್ ಕುಮಾರ್ ತಿಳಿಸಿದ್ದಾರೆ.

Exit mobile version