Site icon Suddi Belthangady

ಕಣಿಯೂರು ಕುಪ್ಪೆಟ್ಟಿ ಹೊಳೆಗೆ ತ್ಯಾಜ ಸುರಿಯುತ್ತಿದ್ದ ವ್ಯಕ್ತಿಗೆ ಸ್ಥಳದಲ್ಲಿ ದಂಡ ವಿಧಿಸಿದ ಪಿ.ಡಿ.ಓ

ಕಣಿಯೂರು: ಕಣಿಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಪ್ಪೆಟ್ಟಿ ಹೊಳೆಗೆ ಕರಾಯ ಹುಣ್ಸೆಕಟ್ಟೆ ನಿವಾಸಿ ಆರೀಪ್ ರವರು ತ್ಯಾಜ್ಯ ವಸ್ತುಗಳನ್ನು ಸುರಿಯಲು ತಂದಾಗ ಬಂದಾರು ಗ್ರಾಮದ ಉಗ್ರಾಣಿ ಕೇಶವ ಗೌಡ ಗಮನಿಸಿ ಕೂಡಲೇ ವಾಹನವನ್ನು ತಡೆದು ನಿಲ್ಲಿಸಿದರು.ಹಾಗೂ ಕಣಿಯೂರು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ತಿಳಿಸಿದ್ದರು.ಕೂಡಲೇ ಕುಪ್ಪೆಟ್ಟಿ ಹೊಳೆ ಬದಿಗೆ ಪಿ‌.ಡಿ.ಓ ಪೂರ್ಣಿಮಾ ಪಿ.ಜೆ ಭೇಟಿ ನೀಡಿ ತ್ಯಾಜ್ಯ ವಸ್ತುಗಳನ್ನು ಸುರಿಯಲು ಬಂದಿರುವ ಆರೀಪ್ ರವರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವ ಮೂಲಕ ಗ್ರಾಮಸ್ಥರ ಮೆಚ್ಚುಗೆ ಗಳಿಸಿದ್ದಾರೆ.

Exit mobile version