Site icon Suddi Belthangady

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ನಾಯಕತ್ವ ತರಬೇತಿ

ಮುಂಡಾಜೆ: ಕಾಲೇಜು ಶಿಕ್ಷಣದ ಹಂತದಲ್ಲಿ ದೊರಕುವ ಎಲ್ಲಾ ನಾಯಕತ್ವ ಗುಣಗಳನ್ನು ಅವಕಾಶಗಳನ್ನು ಸದುಪಯೋಗದಿಂದ ಬಳಸಿಕೊಳ್ಳಬೇಕು ಎಂದು ಜೆಸಿಐ ತರಬೇತುದಾರರಾದ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಹೇಮಾವತಿ ಹೇಳಿದರು.

ಮುಂಡಾಜೆ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣಗಳನ್ನು ರೂಪಿಸಿಕೊಳ್ಳುವುದರ ಬಗ್ಗೆ ತರಬೇತಿ ನೀಡಿದರು .
ಕಾಲೇಜಿನ ಪ್ರಾಂಶುಪಾಲೆ ಜ್ವಾಲಿ ಒ.ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕುಮಾರಿ ವಿಂದ್ಯ ಸ್ವಾಗತಿಸಿ ಕುಮಾರಿ ರಕ್ಷಿತಾ ಪ್ರಸ್ತಾವಿಸಿದರು.

ಕುಮಾರಿ ಕೀರ್ತನ ನಿರೂಪಿಸಿ, ವಿದ್ಯಾರ್ಥಿ ನಾಯಕ ಯೋಗೀಶ ವಂದಿಸಿದರು.

Exit mobile version