Site icon Suddi Belthangady

ಉಜಿರೆ: ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ.ಅಪರೇಟಿವ್‌ ಸೊಸೈಟಿ ಉದ್ಘಾಟನೆ

ಉಜಿರೆ : ಉಜಿರೆಯ ಕಾಶಿಬೆಟ್ಟು ಶ್ರೀ ರಾಜೇಶ್ವರಿ ಕಾಂಪ್ಲೆಕ್ಸ್ ನಲ್ಲಿ ಜು. 23ರಂದು ಸಹನಾಶ್ರೀ ಕ್ರೆಡಿಟ್ ಸೌಹಾರ್ದ ಕೋ. ಅಪರೇಟಿವ್‌ ಸೊಸೈಟಿಯ ಉದ್ಘಾಟನಾ ಸಮಾರಂಭ ನಡೆಯಿತು.

ಬೆಳ್ತಂಗಡಿ ಧರ್ಮಪ್ರಾಂತ್ಯ ದ ಧರ್ಮಧ್ಯಕ್ಷರಾದ ಅತಿ ವಂದನೀಯ ಪರಮಪೂಜ್ಯ ಬಿಷಪ್ ಲಾರೆನ್ಸ್ ಮುಕ್ಕುಯಿ ಸಭಾ ಕಾರ್ಯಕ್ರಮದ ಉದ್ಘಾಟನೆ ಮಾಡಿ ಶುಭ ಹಾರೈಸಿದರು.

ಮಾಜಿ ಶಾಸಕ ಕೆ. ವಸಂತ ಬಂಗೇರ ಸಂಘದ ಕಛೇರಿ ಉದ್ಘಾಟಿಸಿದರು. ಮಾಜಿ ಸಚಿವ ಕೆ. ಗಂಗಾಧರ ಗೌಡ, ಭಾರತ ಸರಕಾರ ಎಫ್.ಸಿ.ಐ ಸದಸ್ಯ ವೇಣು ಯಾದವ್, ಬೆದ್ರಬೆಟ್ಟು ಮರಿಯಾಂಬಿಕಾ ಚರ್ಚ್ ಧರ್ಮ ಗುರುಗಳು ರೇ. ಫಾ. ಸೆಬಾಸ್ಟಿನ್, ದ.ಕ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಉಪಾಧ್ಯಕ್ಷ ಬಿ.ಎಂ. ಹಮೀದ್, ಅಖಿಲ ಭಾರತ ಕ್ಯಾಥೋಲಿಕ್‌ ಯೂನಿಯನ್ ಅಧ್ಯಕ್ಷ ಸೇವಿಯರ್ ಪಾಲೇಲಿ , KSMCA ಅಧ್ಯಕ್ಷರು ಬಿಟ್ಟಿ ಬಿ. ನೆಡುನಿಲಂ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ ಮುಖ್ಯ ಅತಿಥಗಳಾಗಿದ್ದರು.

ವಿಶೇಷ ಆಹ್ವಾನಿತರಾಗಿ ರೆ| ಫಾ| ಜಾರ್ಜ್ ತೀಂಡಪಾರ ಧರ್ಮಗುರುಗಳು, ಉಜಿರೆ ಸಿರಿಲ್‌ ಚೆರಿಯಪಳ್ಳಿ ಧರ್ಮಗುರುಗಳು ದೇವಗಿರಿ, ಅಣ್ಣಿ ಪೂಜಾರಿ ಮಾಲಕರು ಶ್ರೀ ರಾಜರಾಜೇಶ್ವರೀ ಕಾಂಪ್ಲೆಕ್ಸ್ ಕಾಶಿಬೆಟ್ಟು, ಲಕ್ಷ್ಮಣ ಗೌಡ ಹಾಲಿ ನಿರ್ದೇಶಕರು ಸಿ.ಎ ಬ್ಯಾಂಕ್ ಬಂಗಾಡಿ, ಆ್ಯಂಟನಿ ಟಿ.ಪಿ. ನಿವೃತ್ತ ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ, ಜೋಸ್‌ ಇ.ಎಂ.ಮಾಜಿ ನಿರ್ದೇಶಕರು ಸಿ.ಎ ಬ್ಯಾಂಕ್ ಬಂಗಾಡಿ, ಪೌಲ್ ಇ.ಎ., ಪ್ರಬಂಧಕರು, ಸಿಎ ಬ್ಯಾಂಕ್ ಬಂಗಾಡಿ ದಿಡುಪೆ ಬ್ರಾಂಚ್, ಝಕೀರ್ ಹುಸೈನ್ ಉದ್ಯಮಿಗಳು ಉಜಿರೆ, ಸೆಬಾಸ್ಟಿನ್ ಪಿ.ಸಿ., ಪಿ.ಆರ್.ಒ. KSMCA, ಸೆ ಬಾಸ್ಟಿನ್ ಎಂ.ಜೆ., ಪಧಾನ ಕಾರ್ಯದರ್ಶಿ ಕೆ.ಎಸ್.ಎಂ.ಸಿ.ಎ., ಸೆಬಾಸ್ಟಿನ್ ವಿ.ಟಿ.ಮಾಜಿ ಅಧ್ಯಕ್ಷ ತಾಲೂಕು ಸ್ಥಾಯಿ ಸಮಿತಿ ಬೆಳ್ತಂಗಡಿ, ಜೈಸನ್ ಪಟ್ಟೇರಿ ವಲಯಾಧ್ಯಕ್ಷ KSMCA, ಧರ್ಮಸ್ಥಳ ವಲಯ, ಅಜಿತ್ ಪಿ.ಜಿ. ಮುಖ್ಯಕಾರ್ಯನಿರ್ವಹಣಾಧಿಕಾರಿ, ಕ್ರೈಸ್ತ ಅಲ್ಪಸಂಖ್ಯಾತರ ವಿವಿದೋದ್ದೇಶ ಸಹಕಾರಿ ಸಂಘ ಸುಳ್ಯ, ರೆಜಿ ಜಾರ್ಜ್ ಅಧ್ಯಕ್ಷ KSMCA ಬೆಳ್ತಂಗಡಿ ವಲಯ, ಪಿ.ಆರ್. ಪಳನಿಸ್ವಾಮಿ, ಪ್ರಗತಿಪರ ಕೃಷಿಕರು, ವೀರಪ್ಪ ಮೋಯ್ಲಿ ಸದಸ್ಯ ಗ್ರಾ.ಪಂ.ಇಂದಬೆಟ್ಟು ಮೊದಲಾದವರು ಭಾಗವಹಿಸಿದ್ದರು.

ಸಂಘದ ಅಧ್ಯಕ್ಷರ ರಾಜೇಶ್ ಪುದುಶೇರಿ, ನಿರ್ದೇಶಕರುಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯ, ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

Exit mobile version