Site icon Suddi Belthangady

ಶೀಘ್ರವೇ ಕಡತ ವಿಲೇವಾರಿ ಮಾಡದಿದ್ದಲ್ಲಿ ಹೋರಾಟ- ಗುರುಪ್ರಸಾದ್ ಮಾಲಾಡಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ 5 ವರ್ಷಗಳಿಂದ ಕಡತ ವಿಲೇವಾರಿಯಾಗದೆ ಉಳಿದಿದೆ.ಕಡತ ವಿಲೇವಾರಿಗಾಗಿ ಸಾರ್ವಜನಿಕರು ಕಚೇರಿಗೆ ಎಷ್ಟು ಬಾರಿ ಭೇಟಿ ನೀಡಿದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಸರಕಾರದ ವಿವಿಧ ಯೋಜನೆಗಳ ಹಾಗೂ ಜನ ಸಾಮಾನ್ಯರ ಬೇಡಿಕೆಗಳು ಕಡತ ವಿಲೇವಾರಿ ವೇಗದಿಂದ ನಡೆಯಬೇಕಿದ್ದು ಸೂಕ್ತ ಸಮಯದಲ್ಲಿ ಜನತೆಗೆ ಸೇವೆ ದೊರಕುತ್ತಿಲ್ಲ.ಈ ನಿಟ್ಟಿನಲ್ಲಿ ತಾಲೂಕಿನ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪರಿಗಣಿಸಿ ಮುಂಬರುವ ದಿನಗಳಲ್ಲಿ ಹೋರಾಟವನ್ನು ಮಾಡಲಾಗುವುದು ಎಂದು ಕನ್ನಡ ಸೇನೆ ಕರ್ನಾಟಕದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಗುರುಪ್ರಸಾದ್ ಮಾಲಾಡಿ ತಿಳಿಸಿದ್ದಾರೆ.

Exit mobile version