Site icon Suddi Belthangady

ಪತ್ರಕರ್ತ ನಿಶಾಂತ್ ಬಿಲ್ಲಂಪದವು ಹಲ್ಲೆ ಖಂಡಿಸಿ ತಾಲೂಕು ಪತ್ರಕರ್ತರ ಸಂಘದಿಂದ ಆರೋಪಿಯ ವಿರುದ್ಧ ಸೂಕ್ತ ತನಿಖೆಗೆ ರಾಜ್ಯಪಾಲರಿಗೆ ಮನವಿ

ಬೆಳ್ತಂಗಡಿ: ಪುತ್ತೂರಿನ ಪತ್ರಕರ್ತ ನಿಶಾಂತ್ ಬಿಲ್ಲಂಪದವು ಇವರ ಮೊಬೈಲ್ ಕಸಿದು ನೆಲಕ್ಕೆ ಬಡಿದು ದೌರ್ಜನ್ಯ ನಡೆಸಿರುವ ಗುತ್ತಿಗೆದಾರರ ನಡೆಯನ್ನು ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿ, ಆರೋಪಿಯ ವಿರುದ್ಧ ಪ್ರಕರಣ ದಾಖಳಲಿಸಿ ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿ ರಾಜ್ಯಪಾಲರಿಗೆ ಬೆಳ್ತಂಗಡಿ ತಹಸೀಲ್ದಾರ್ ಮೂಲಕ ಹಾಗೂ ಪೊಲೀಸ್ ಅಧೀಕ್ಷರಿಗೆ ಬೆಳ್ತಂಗಡಿ ಪೊಲೀಸ್ ವೃತ್ತ ನೀರಿಕ್ಷರ ಮೂಲಕ ಮನವಿ ನೀಡಲಾಯಿತು.
ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹೃಸಿಕೇಷ್ ಧರ್ಮಸ್ಥಳ, ಕಾರ್ಯದರ್ಶಿ ಪ್ರಸಾದ್ ಶೆಟ್ಟಿ ಏನಿಂಜೆ, ಕೋಶಾಧಿಕಾರಿ ತುಕಾರಾಮ್, ಸದಸ್ಯರಾದ ದೇವಿಪ್ರಸಾದ್, ಬಿ. ಎಸ್. ಕುಲಾಲ್, ಜಾರಪ್ಪ ಪೂಜಾರಿ ಬೆಳಾಲು, ಶಿಬಿ ಧರ್ಮಸ್ಥಳ, ಆಚುಶ್ರೀ ಬಾಂಗೇರು, ಶ್ರೀನಿವಾಸ ತಂತ್ರಿ ಹಾಜರಿದ್ದರು

Exit mobile version