Site icon Suddi Belthangady

ಶಿಬಾಜೆ: ಹಿಂದೂಗಳ ಮೇಲೆ ನಡೆದ ದೌರ್ಜನ್ಯದ ಪ್ರಯುಕ್ತ ಬೃಹತ್ ಪ್ರತಿಭಟನೆ

ಶಿಬಾಜೆ: ವಿಶ್ವ ಹಿಂದೂ ಪರಿಷತ್ ಬಜರಂಗದಳ ಶಿಬಾಜೆ ಘಟಕದ ವತಿಯಿಂದ ಶಿಬಾಜೆಯಲ್ಲಿ ಹಿಂದೂಗಳ ಮೇಲೆ ನಡೆದಂತಹ ದೌರ್ಜನ್ಯದ ಪ್ರಯುಕ್ತ ಬೃಹತ್ ಪ್ರತಿಭಟನೆ ಜು.10 ರಂದು ಶಿಬಾಜೆ ಗ್ರಾಮ ಪಂಚಾಯತ್ ಎದುರು ನಡೆಯಿತು.


ಈ ಸಂದರ್ಭದಲ್ಲಿ ವಿಭಾಗ ಸಹಸಂಯೋಜಕರಾದ ಮುರಳಿ ಕೃಷ್ಣ ಹಸಂತಡ್ಕ ವಿಶ್ವ ಹಿಂದೂ ಪರುಷತ್‌ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಶ್ರೀಧರ ತೆಂಕಿಲ, ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷರಾದ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ ಬೆಳ್ತಂಗಡಿ, ಸಯೋಜಕರಾದ ಸಂತೋಷ್ ಅತ್ತಾಜೆ, ಗೋ ರಕ್ಷಾ ಪ್ರಮುಖರಾದ ರಮೇಶ್ ಧರ್ಮಸ್ಥಳ, ಉಪಾಧ್ಯಕ್ಷಾರದ ಸತೀಶ್ ನೆರಿಯ, ಪುತ್ತೂರು ಜಿಲ್ಲಾ ಅಖಾಡ ಪ್ರಮುಖರಾದ ಗಣೇಶ್ ಕಳೆಂಜ, ಪ್ರಖಂಡ ಆಖಾಡ ಪ್ರಮುಖರಾದ ಉಮೇಶ್ ಕಳೆಂಜ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿಬಾಜೆ ಗ್ರಾಮ ಸಮಿತಿ ಹಾಗೂ ರೆಖ್ಯ ಶಿಶಿಲ, ಅರಸಿನಮಕ್ಕಿ, ಕೊಕ್ಕಡದ ಹಿಂದೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Exit mobile version