Site icon Suddi Belthangady

ಮಡಂತ್ಯಾರು: ವಾಹನಕ್ಕೆ ಸೈಡ್ ಕೊಡುವ ವೇಳೆ ಜಾರಿ ಮಾರ್ಗದ ಬದಿಯ ಚರಂಡಿಗೆ ಬಿದ್ದ ಕೆ.ಎಸ್.ಆರ್.ಟಿ.ಸಿ ಬಸ್

ಮಡಂತ್ಯಾರು: ಕೊಲ್ಪದಬೈಲು ಎಂಬಲ್ಲಿ ದರ್ಮಸ್ಥಳ ಕಡೆ ಸಾಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಇನ್ನೊಂದು ಗಾಡಿಗೆ ಸೈಡ್ ಕೊಡುವ ಸಂದರ್ಭ ಜಾರಿ ಮಾರ್ಗದ ಬದಿಯ ಚರಂಡಿಗೆ ಬಿದ್ದ ಘಟನೆ ಜು. 9‌ರಂದು ನಡೆದಿದೆ.

ಸ್ಥಳೀಯ ಜನರು ಬಸ್ಸನ್ನು ಚರಂಡಿಯಿಂದ ಮೇಲೆತ್ತಲು ಸಹಕರಿಸಿದರೂ ಸಾದ್ಯವಾಗಿಲ್ಲ. ರಸ್ತೆಯ ಅಗಲೀಕರಣದ ಕಾಮಗಾರಿ ಕೆಲಸ ಮಳೆಗಾಲದ ಸಂದರ್ಭದಲ್ಲಿ ನಡೆಯುತ್ತಿದ್ದು ಮಾರ್ಗದ ಬದಿಯಲ್ಲಿ ಮಣ್ಣು ತುಂಬಿ ವಾಹನ ಚಾಲಕರು ಜನರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಲು ಕಷ್ಟ, ಹರಸಾಹಸ ಪಡುತ್ತಿದ್ದಾರೆ.

Exit mobile version