Site icon Suddi Belthangady

ನಡ: ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪುರಂದರ ಪೂಜಾರಿ ಹೃದಯಾಘಾತದಿಂದ ನಿಧನ

ನಡ : ನಡ ಗ್ರಾಮದ ಸುರ್ಯ ದೇವಸ್ಥಾನ ಬಳಿಯ ಲೀಲಾವತಿಯವರ ಪುತ್ರ ಪುರಂದರ (41) ವರ್ಷ ಇಂದು ಮುಂಜಾನೆ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೃತರು 4ದಿವಸ ಮುಂಚೆ ನೋವು ಕಂಡು ಆಸ್ಪತ್ರೆಗೆ ತೆರಳಿ ಮರಳಿದ್ದರು.ನಿನ್ನೆ ಮತ್ತೆ ಎದೆ ನೋವು ಕಾಣಿಸಿ ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ಜುಲೈ 8ರಂದು ನಿಧನ ರಾಗಿದ್ದಾರೆ.

ಇವರು ಸ್ವ ಉದ್ಯೋಗವನ್ನು ನಡೆಸುತ್ತಿದ್ದು ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರಾಗಿದ್ದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳುನ್ನು ಹಾಗು ಬಂದು ವರ್ಗದವರನ್ನು ಆಗಲಿದ್ದಾರೆ

Exit mobile version