Site icon Suddi Belthangady

ರೋಟರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಜಿರೆ: ಬೆಳ್ತಂಗಡಿ ರೋಟರಿ ಕ್ಲಬ್ ನ ಈ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಜಿರೆಯ ಶ್ರೀ ಕೃಷಾನುಗ್ರಹ ಸಭಾ ಭವನದಲ್ಲಿ ಜು.6ರಂದು ಜರಗಿತು.

ನೂತನ ಪದಾಧಿಕಾರಿಗಳಿಗೆ ನಿಯೋಜಿತ ಜಿಲ್ಲಾ ರಾಜ್ಯಪಾಲ ವಿಕ್ರಂ ದತ್ತ ಪ್ರಮಾಣ ವಚನ ಭೋಧಿಸಿದರು.ನೂತನ ಅಧ್ಯಕ್ಷ ಎಂ.ಅನಂತ ಭಟ್ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಗವರ್ನರ್ ಡಾ.ರಮೇಶ, ಝೋನಲ್ ಲೆಫ್ಟಿನೆಂಟ್ ಯಶವಂತ ಪಟವರ್ಧನ್ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಸ್ವಾಗತಿಸಿದರು.ನಿಕಟ ಪೂರ್ವ ಕಾರ್ಯದರ್ಶಿ ರಕ್ಷಾ ರಾಗ್ನೇಶ್ ವರದಿ ವಾಚಿಸಿದರು.

ಮಾಜಿ ಅಧ್ಯಕ್ಷ ದಯಾನಂದ ನಾಯಕ್, ಡಾ.ಪ್ರದೀಪ್ ಎ., ಶ್ರೀನಿವಾಸ ರಾವ್ ಅತಿಥಿಗಳನ್ನು, ಧನಂಜಯ ರಾವ್ ಸದಸ್ಯರನ್ನು ಪರಿಚಯಿಸಿದರು.

ಅಕ್ಷತಾ ವಿದ್ಯಾಕುಮಾರ್ ಹಾಗೂ ಸಂದೇಶ ರಾವ್ ರಾವ್ ಕಾರ್ಯಕ್ರಮ ನಿರೂಪಿಸಿದರು.ನೂತನ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡ್ ವಂದಿಸಿದರು.

Exit mobile version