Site icon Suddi Belthangady

ಕೊಯ್ಯೂರು ಅಂಚೆ ಕಚೇರಿಯಲ್ಲಿ ಆಧಾರ್ ಕೇಂದ್ರ ಉದ್ಘಾಟನೆ

ಕೊಯ್ಯೂರು: ಕೊಯ್ಯೂರು ಅಂಚೆ ಕಚೇರಿ ಹಾಗೂ ರೈತ ಉತ್ಪಾದಕ ಕೇಂದ್ರ ಉಜಿರೆ ಇದರ ಜಂಟಿ ಆಶ್ರಯದ ಮನವಿಯನ್ನು ಪುರಸ್ಕರಿಸಿ, ಅಂಚೆ ಇಲಾಖೆ ಅಧಿಕಾರಿಗಳು ಕೊಯ್ಯೂರು ಶಾಖಾ ಅಂಚೆ ಕಚೇರಿಗೆ “ಆಧಾರ್ ಸೇವಾ ಕೇಂದ್ರ” ವನ್ನು ಒದಗಿಸುವ ಮೂಲಕ ಜು.4 ರಂದು ಉದ್ಘಾಟನೆಗೊಂಡಿತು.

ಬೆಳ್ತಂಗಡಿ ಉಪವಿಭಾಗದ ಅಂಚೆ ನಿರೀಕ್ಷಕ ಸುಜಯ್ ರವರನ್ನು ಅಂಚೆ ವತಿಯಿಂದ “ಅಂಚೆ ಇಲಾಖೆ ಮಾಣಿಕ್ಯ” ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ಗಣೇಶ್ ಭಟ್, ಶಶಿಕಲಾ, ರಾಜು, ಜಿ.ಕೆ. ಶರ್ಮ ಕೊಯ್ಯೂರು, ಉಪಸ್ಥಿತರಿದ್ದು ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಕೊಯ್ಯೂರು ಗ್ರಾಮ ಪಂಚಾಯತ್ ಜನ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಬಾಗವಹಿಸಿದರು.

Exit mobile version