Site icon Suddi Belthangady

ಬೆಳಾಲು ಪ್ರೌಢಶಾಲೆಯ ಶಿಕ್ಷಕ ರಕ್ಷಕ ಸಮಿತಿ ಅಧ್ಯಕ್ಷರಾಗಿ ಶೇಖರ ಗೌಡ ಕೊಲ್ಲಿಮಾರ್, ಉಪಾಧ್ಯಕ್ಷರಾಗಿ ವಸಂತಿ ಮಂಡಾಲು ಆಯ್ಕೆ

ಬೆಳಾಲು: ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ನೂತನ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಆಯ್ಕೆ ಜರಗಿತು.
ಅಧ್ಯಕ್ಷರಾಗಿ ಶೇಖರ ಗೌಡ ಕೊಲ್ಲಿಮಾರ್, ಉಪಾಧ್ಯಕ್ಷರಾಗಿ ವಸಂತಿ ಮಂಡಾಲುರವರು ಅವಿರೋಧವಾಗಿ ಆಯ್ಕೆಯಾದರು.

ಸದಸ್ಯರಾಗಿ ಸುಂದರ ಮಾಯ, ಸುಲೈಮಾನ್ ಭೀಮಂಡೆ, ಓಡಿಯಪ್ಪ ಕೆರೆಕೋಡಿ, ಜಾನಕಿ ಕೊಲ್ಪಾಡಿ, ಸುಭಾಶ್ಚಂದ್ರ ಜೈನ್ ಇರೆಂತ್ಯಾರು, ಪುರಂದರ ಧರ್ಮಸ್ಥಳ, ಸೀತಾಲಕ್ಷ್ಮಿ ಕೆಮ್ಮಟೆ, ಶಶಿಕಲಾ ಕೊಲ್ಪಾಡಿ, ಹೇಮಾವತಿ ಇದಿಂಗಿಲ ಇವರುಗಳು ಆಯ್ಕೆಗೊಂಡರು.

ಸಮಿತಿಯ ಕಾರ್ಯದರ್ಶಿಗಳಾಗಿ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಜತೆಕಾರ್ಯದರ್ಶಿಯಾಗಿ ಹತ್ತನೇ ತರಗತಿ ಶಿಕ್ಷಕರಾದ ಸುಮನ್ ರವರು ಕಾರ್ಯ ನಿರ್ವಹಿಸಲಿದ್ದಾರೆ.

ಆಯ್ಕೆ ಪ್ರಕ್ರಿಯೆಯನ್ನು ರವಿಚಂದ್ರ ಜೈನ್ ರವರು ನಡೆಸಿಕೊಟ್ಟರು.

Exit mobile version