Site icon Suddi Belthangady

ಕನ್ಯಾಡಿ 1: ಸ.ಉ.ಹಿ.ಪ್ರಾ.ಶಾಲೆಯಲ್ಲಿ ಸ್ವಚ್ಛತಾ ಶ್ರಮದಾನ ನಡೆಸಿದ ನಡ/ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡ

ಬೆಳ್ತಂಗಡಿ: ಕನ್ಯಾಡಿ ಶಾಲೆಯಲ್ಲಿ ನಡ /ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ಸ್ವಚ್ಛತಾ ಶ್ರಮದಾನ ನಡೆಸಲಾಯಿತು.

ಶ್ರಮದಾನದಲ್ಲಿ ಭಾಗವಹಿಸಿದ ಶೌರ್ಯ ತಂಡದ ಮೋಹನ್, ಮಂಜುನಾಥ್, ಜೀವನ್ ಡಿಸೋಜ ಹರೀಶ್, ಅನಿಲ್ ಡೇಸಾ, ವಸಂತ, ಕೇಶವ, ಅರ್ವಿನ್ ಮಿರಾಂದ, ಶೇಕ್ ಹರ್ಷದ್, ಪುರಂದರ, ಲೀಲಾ, ಸುಲೋಚನಾ, ಪುಷ್ಪಲತಾ ಇವರೆಲ್ಲರೂ ಪಾಲ್ಗೊಂಡು ಯಶಸ್ವಿಯಾಗಿ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಹನುಮಂತರಾಯ, ಶಾಲಾ ಅಧ್ಯಾಪಕ ವಿಕಾಸ್, ಎಸ್.ಡಿ.ಎಂ.ಸಿ ಅಧ್ಯಕ್ಷ ನೋಣಯ್ಯ ಗೌಡ, ಸಮಿತಿ ಸದಸ್ಯರಾದ ರಘುಚಂದ್ರ ಶೆಟ್ಟಿ ಉಪಸ್ಥಿತರಿದ್ದು, ಇಬ್ಬರು ಹಳೆ ವಿದ್ಯಾರ್ಥಿಗಳು ಹಾಗೂ ಶಾಲಾಭಿವೃದ್ಧಿ ಅಧ್ಯಕ್ಷರು, ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.

ಶೌರ್ಯ ತಂಡದ ಸ್ವಯಂ ಸೇವಕರ ಸೇವೆಗೆ ಶಾಲಾ ಮುಖ್ಯ ಶಿಕ್ಷಕರು, ಅಧ್ಯಕ್ಷರು ಬಹಳ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು.ಶೌರ್ಯ ತಂಡದ ಸಂಯೋಜಕರಾದ ಕುಮಾರಿ ವಸಂತಿ ಇವರು ಸ್ವಯಂ ಸೇವಕರಿಗೆ ಪ್ರೇರಣೆ ನೀಡಿದರು.

Exit mobile version