Site icon Suddi Belthangady

ಬೆಳ್ತಂಗಡಿ: ನಿವೃತ್ತ ಅಭಿವೃದ್ಧಿ ಅಧಿಕಾರಿ ಜಯದೇವ್ ಅವರಿಗೆ ಬೀಳ್ಕೊಡುಗೆ ಸಮಾರಂಭ

ಬೆಳ್ತಂಗಡಿ: ಸ್ಪೋರ್ಟ್ಸ್ ಮತ್ತು ರೀಕ್ರಿಯೇಷನ್ ಕ್ಲಬ್, ಎಲ್ಐಸಿ ಆಫ್ ಇಂಡಿಯಾ ಬಂಟ್ವಾಳ, ಹಾಗೂ ಅಭಿವೃದ್ಧಿ ಅಧಿಕಾರಿ ಜಯದೇವ್ ಪ್ರತಿನಿಧಿ ಬಳಗ ಬೆಳ್ತಂಗಡಿ ಬಳಗದವರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ಎಸ್ ಡಿ ಎಂ ಪಿನಾಕಿ ಹಾಲ್ ನಲ್ಲಿ ಜು.1ರಂದು ಬೀಳ್ಕೊಡುಗೆ ಸಮಾರಂಭ ನಡೆಯಿತು.

ಎಲ್ಐಸಿ ಬಂಟ್ವಾಳ ಶಾಖೆಯ ಮುಖ್ಯ ಪ್ರಬಂಧಕ ಕೆ.ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಎಲ್ಐಸಿ ಹಿರಿಯ ವಿಭಾಗೀಯ ಅಧಿಕಾರಿ ರಾಜೇಶ್ ವಿ. ಮುದೊಳ್, ಎಲ್ಐಸಿ ಉಡುಪಿ ಮಾರ್ಕೆಟಿಂಗ್ ಮೆನೇಜರ್ ಬಿ. ಜು. ಜೊಸೆಫ್, ಸೇಲ್ಸ್ ಮ್ಯಾನೇಜರ್ ಪುರಂದರ, ಬೆಳ್ತಂಗಡಿ ಎಲ್ಐಸಿ ಶಾಖಾಧಿಕಾರಿ ವಿ.ಎಸ್.ಕುಮಾರ್, ನ್ಯಾಯವಾದಿ ಸುಬ್ರಮಣ್ಯ ಕುಮಾರ್ ಅಗರ್ತ, ನಿವೃತ್ತ ಅಭಿವೃದ್ಧಿ ಅಧಿಕಾರಿ ಎಂ. ಜಿ. ಶೆಟ್ಟಿ, ಅಭಿವೃದ್ಧಿ ಅಧಿಕಾರಿಗಳ ಯೂನಿಯನ್ ಅಧ್ಯಕ್ಷ ಮಂಜುನಾಥ್ ಹೆಬ್ಬಾರ್, ಕಾರ್ಯದರ್ಶಿ ಸಂದೇಶ್ ಹೆಚ್ ಎಂ., ಸ್ಪೋರ್ಟ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಸರ್ವ ಸದಸ್ಯರು, ಜಯದೇವ್ ಬಳಗ ಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳಾದ ಎಂ.ವಿಶ್ವೇಶ್ವರ ಶೆಟ್ಟಿ, ಟಿ. ಡಿ. ರಾಘವೇಂದ್ರ, ಜಯದೇವ್ ರವರ ಧರ್ಮಪತ್ನಿ ಸವಿತಾ, ಮಕ್ಕಳಾದ ಸಂಜನಾ ಹಾಗು ಶ್ರೀನಿಖಾ, ಎಲ್ಐಸಿ ಪ್ರತಿನಿಧಿ ಮಿತ್ರರು ಉಪಸ್ಥಿತರಿದ್ದರು.

ದಿನೇಶ್ ಎಂ ಕಾರ್ಯಕ್ರಮ ನಿರೂಪಿಸಿದರು.ಅಭಿವೃದ್ಧಿ ಅಧಿಕಾರಿ ಎಂ.ವಿ.ಶೆಟ್ಟಿ ಸ್ವಾಗತಿಸಿದರು.

Exit mobile version