Site icon Suddi Belthangady

ಬೆಳ್ತಂಗಡಿ ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಮಂತ್ರಿ ಮಂಡಲ ಉದ್ಘಾಟನೆ

ಬೆಳ್ತಂಗಡಿ: ಜು.1ರಂದು ಸಂತ ತೆರೇಸಾ ಸಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂತ್ರಿ ಮಂಡಲವನ್ನು ಉದ್ಘಾಟಿಸಲಾಯಿತು.

ಮಂತ್ರಿ ಮಂಡಲಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರಾದ ಭಗಿನಿ ಆರೋಗ್ಯರವರು ಪ್ರಮಾಣವಚನ ಬೋಧಿಸಿ ಪದಾಧಿಕಾರಿಗಳಿಗೆ ಕರ್ತವ್ಯಗಳನ್ನು ಮನದಟ್ಟು ಮಾಡಿಸಿದರು.ಕಾಲೇಜಿನ ನಾಯಕಿ ಕುಮಾರಿ ತೇಜಸ್ವಿನಿ ಹಾಗೂ ಉಪನಾಯಕ ಸಾಯಿರೋಹನ್ ತನ್ನ ಕರ್ತವ್ಯವನ್ನು ಚಾಚು ತಪ್ಪದೇ ನಿರ್ವಹಿಸುತ್ತೇವೆ.ಮಾತ್ರವಲ್ಲದೆ ಕಾಲೇಜಿನ ಉನ್ನತಿಗೆ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು ಹಾಗೂ ವಿದ್ಯಾರ್ಥಿಗಳ ಸಹಕಾರವನ್ನು ಕೋರಿದರು.ವಿದ್ಯಾರ್ಥಿಗಳಾದ ಶೆಲ್ವಿ ಮರಿಯ ಕಾರ್ಯಕ್ರಮವನ್ನು ನಿರ್ವಹಿಸಿ, ಅಲ್ಬಿಯಾ ಅವರು ಸ್ವಾಗತಿಸಿ, ಚೈತ್ರಾರವರು ವಂದಿಸಿದರು.

ಕಾಲೇಜಿನ ಎಲ್ಲಾ ಉಪನ್ಯಾಸಕರು ಉಪಸ್ಥಿತರಿದ್ದರು.

Exit mobile version