Site icon Suddi Belthangady

ಮುಂಡಾಜೆ ಹಾ.ಉ.ಸ.ಸಂಘ- ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5ನೇ ಬಾರಿ ಆಯ್ಕೆ, ಉಪಾಧ್ಯಕ್ಷರಾಗಿ ಜಯಂತ ಗೌಡ.ಎಂ

ಮುಂಡಾಜೆ: ಮುಂಡಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಅನಂತ ಭಟ್ ಮಚ್ಚಿಮಲೆ 5 ನೇ ಬಾರಿ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಜಯಂತ ಗೌಡ ಎಂ. ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಸಂಜೀವ ಗೌಡ, ಯಶೋಧರ ಗೌಡ, ಜಯಪ್ರಸಾದ್ ಗೌಡ, ರಾಮಣ್ಣ ಪೂಜಾರಿ, ಬೇಬಿ ಕೆ.ವಿ, ಚಿನ್ನಮ್ಮ, ಶೋಭಾ, ಚಂದ್ರಹಾಸ, ಬಾಲಕೃಷ್ಣ ಗೌಡ, ಈಶ್ವರ ಹಾಗೂ ಲೀಲಾವತಿ ಇವರು ಸೇವೆ ಸಲ್ಲಿಸಲಿದ್ದಾರೆ.

ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿ ಅಧೀಕ್ಷಕ ಬಿ.ನಾಗೇಂದ್ರ ಚುನಾವಣಾ ಅಧಿಕಾರಿಯಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.

Exit mobile version