Site icon Suddi Belthangady

ಕೊಲ್ಪಾಡಿ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ದಾಮೋದರ ಗೌಡ ಸುರುಳಿ ನೀಡಿರುವ ಪುಸ್ತಕ ವಿತರಣೆ

ಬೆಳಾಲು: ಇಲ್ಲಿಯ ಕೊಲ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ದಾಮೋದರ ಗೌಡ ಸುರುಳಿ ಉಚಿತವಾಗಿ ನೀಡಿರುವ ಬರೆಯುವ ಪುಸ್ತಕ ವಿತರಣಾ ಸಮಾರಂಭ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಾಧವ ಗೌಡ ಓನಾಜೆ ವಹಿಸಿದ್ದರು.ಬೆಳಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಪದ್ಮ ಗೌಡ ಉದ್ಘಾಟಿಸಿ, ಪುಸ್ತಕ ವಿತರಿಸಿದರು.ದಾನಿ ಬೆಳಾಲು ಪ್ರಾ.ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದಾಮೋದರ ಗೌಡ, ಇನ್ನೊರ್ವ ನಿರ್ದೇಶಕ ವಿಜಯ ಗೌಡ ಸೌತೆಗದ್ದೆ, ಉಜಿರೆ ಕ್ಲಸ್ಟಲ್ ಕೇಂದ್ರದ ಸಿ ಆರ್ ಪಿ ಪ್ರತಿಮಾ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಸ್ವಾಗತಿಸಿ, ಗೌರವ ಶಿಕ್ಷಕ ಕರಿಯಣ್ಣ ಗೌಡ ವಂದಿಸಿದರು. ಸಹಶಿಕ್ಷಕಿ ಪರಮೇಶ್ವರಿ ಎಸ್. ನಿರೂಪಿಸಿದರು.ಶಾಲಾ ಎಸ್ ಡಿ ಎಂ ಸಿ, ಸದಸ್ಯರು, ಪೋಷಕರು, ಮಕ್ಕಳು ಹಾಜರಿದ್ದರು.

Exit mobile version