Site icon Suddi Belthangady

ಉಜಿರೆ: ಅನುಗ್ರಹ ಶಾಲಾ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭ

ಉಜಿರೆ: ಅನುಗ್ರಹ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಮಂತ್ರಿ ಮಂಡಲದ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಜೂ.23ರಂದು ಅನುಗ್ರಹ ಸಭಾಭವನದಲ್ಲಿ ಜರಗಿತು.

ಈ ಕಾರ‍್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಂ! ಫಾ! ಜೆಮ್ಸ್ ಡಿ’ಸೋಜ, ಮುಖ್ಯ ಆತಿಥಿಯಾಗಿ ಶಶಿಕಿರಣ್ ಜೈನ್ ನೋಟರಿ ವಕೀಲರು ಬೆಳ್ತಂಗಡಿ ಇವರು ಉಪಸ್ಥಿತರಿದ್ದರು.
ಹೊಸದಾಗಿ ಆಯ್ಕೆಯಾದ ಶಾಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಮಂತ್ರಿ ಮಂಡಲದ ನೂತನ ಸದಸ್ಯರಿಗೆ ಶಾಲಾ ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ಇವರು ಪ್ರಮಾಣ ವಚನವನ್ನು ಭೋಧಿಸಿದರು.
ಪ್ರೌಢಶಾಲಾ ವಿದ್ಯಾರ್ಥಿ ನಾಯಕಿಯಾಗಿ ಕು.ಅಶ್ಮಿತಾ, ಉಪನಾಯಕನಾಗಿ ಸೂರಜ್ ಟಿ.ಆರ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಸಯನ್ ಜೈನ್, ಉಪನಾಯಕಿಯಾಗಿ ಕು.ಅದಿತಿ, ಹಾಗೂ ಇವರ ಜೊತೆಯಲ್ಲಿ ಮಂತ್ರಿ ಮಂಡಲದ ಇತರ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು.
ಯುವ ನಾಯಕತ್ವದ ಬಧ್ದತೆ, ಕರ್ತವ್ಯ ಹಾಗೂ ಅದರ ಅಗತ್ಯದ ಬಗ್ಗೆ ಮತ್ತು ಶಾಂತಿ ಸೌಹರ್ಧತೆಯಿಂದ ರಾಷ್ಟ್ರಭಿಮಾನವನ್ನು ಮೈಗೂಡಿಸಿ ಇಂದಿನ ಯುವ ಪೀಳಿಗೆ ಬೆಳೆಯಬೇಕಾಗಿದೆ ಎಂದು ವಂ! ಫಾ! ಜೆಮ್ಸ್ ಡಿ’ಸೋಜ, ಮುಖ್ಯ ಆತಿಥಿಯಾದ ಶಶಿಕಿರಣ್ ಜೈನ್ ತಿಳಿಸಿದರು.

ಪ್ರಾಂಶುಪಾಲರಾದ ವಂ! ಫಾ! ವಿಜಯ್ ಲೋಬೋ ಇವರು ಮಂತ್ರಿ ಮಂಡಲದ ಸದಸ್ಯರಿಗೆ ತಮ್ಮ ಕರ್ತವ್ಯದ ಬಗ್ಗೆ ತಿಳಿಸಿದರು.ಪ್ರಮಾಣ ವಚನ ಸ್ವಿಕರಿಸಿದ ಮಂತ್ರಿ ಮಂಡಲದ ಸರ್ವ ಸದಸ್ಯರಿಗೆ ಶುಭವನ್ನು ಹಾರೈಸಿದರು.

Exit mobile version