Site icon Suddi Belthangady

ದೊಂಡೋಲೆಯ ಮನೆಯಲ್ಲಿ ಬೃಹತ್ ಗಾತ್ರದ ಕಾಳಿಂಗ- ಸ್ನೇಕ್ ಜಾಯ್ ರಿಂದ ರಕ್ಷಣೆ

ದೊಂಡೋಲೆ: ಇಲ್ಲಿನ ಮಾಧವ ಆಚಾರ್ಯರವರ ಮನೆಯೊಳಗೆ ವಾಶಿಂಗ್ ಮೆಷಿನ್ ಪಕ್ಕ ಬೃಹತ್ ಗಾತ್ರದ ಕಾಳಿಂಗ ಸರ್ಪ ಅಡಗಿ ಕುಳಿತಿತ್ತು.ಇದು ಮನೆಯವರನ್ನು ಮತ್ತು ಸ್ಥಳೀಯರನ್ನು ಬೆಚ್ಚಿಬೀಳಿಸಿತ್ತು.

ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಹಿಡಿದು ರಕ್ಷಿಸುವಂತೆ ಮಾಧವ ಆಚಾರ್ಯರ ಪುತ್ರ ಕಿರಣ್ ದೊಂಡೋಲೆ ಸ್ನೇಕ್ ಜಾಯ್ ರವರಿಗೆ ಕರೆ ಮಾಡಿದರು.

ಕರೆಗೆ ಕೂಡಲೇ ಸ್ಪಂಧಿಸಿದ ಸ್ನೇಕ್ ಜಾಯ್ ಸ್ಥಳಕ್ಕೆ ಆಗಮಿಸಿ, ಹಾವನ್ನು ಸುರಕ್ಷಿತವಾಗಿ ಹಿಡಿದು ರಕ್ಷಣೆ ಮಾಡಿದರು. ಸ್ಥಳದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.

Exit mobile version