Site icon Suddi Belthangady

ಮೊಗ್ರು: ಶ್ರೀ ದುರ್ಗಾನುಗ್ರಹ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯಕ್ರಮಕ್ಕೆ ಸಹಾಯಧನ ಹಸ್ತಾಂತರ

ಮೊಗ್ರು: ಜೂ.22ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳದಿಂದ ಗ್ರಾಮ ಕಲ್ಯಾಣ ಯೋಜನೆಯ ಕಾರ್ಯಕ್ರಮದಂತೆ ಮೊಗ್ರು ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ದ ಜೀರ್ಣೋದ್ದಾರ ಕಾರ್ಯಕ್ರಮ ಕ್ಕೆ ಮಂಜೂರಾದ 2,00,000/- (ರೂಪಾಯಿ ಎರಡು ಲಕ್ಷ) ಸಹಾಯಧನವನ್ನು ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ದಯಾನಂದ ಪೂಜಾರಿ ತಾಲೂಕು ಯೋಜನಾಧಿಕಾರಿಗಳು, ಶಿವಾನಂದ ಕಣಿಯೂರು ವಲಯ ಮೇಲ್ವಿಚಾರಕರು, ಚಂದ್ರಕಲಾ ಸೇವಾಪ್ರತಿನಿಧಿ, ಲೋಕೇಶ್ ಡಿ ಅಧ್ಯಕ್ಷರು ಮೊಗ್ರು ಒಕ್ಕೂಟ, ಹಾಗೂ ಭಜನಾ ಮಂದಿರ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು ಉಪಸ್ಥಿತರಿದ್ದರು.

Exit mobile version