Site icon Suddi Belthangady

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೆಂಬರ್: ನೂತನ ಅಧ್ಯಕ್ಷರಾಗಿ ಪೃಥ್ವಿರಂಜನ್ ರಾವ್, ಕಾರ್ಯದರ್ಶಿಯಾಗಿ ಚಂದ್ರಹಾಸ ಕೇದೆ, ಕೋಶಾಧಿಕಾರಿಯಾಗಿ ರಾಜಾರಾಮ್ ರಾವ್

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೆಂಬರ್ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಪೃಥ್ವಿರಂಜನ್ ರಾವ್, ಕಾರ್ಯದರ್ಶಿಯಾಗಿ ಚಂದ್ರಹಾಸ ಕೇದೆ, ಕೋಶಾಧಿಕಾರಿಯಾಗಿ ರಾಜಾರಾಮ್ ರಾವ್ ಆಯ್ಕೆಯಾಗಿದ್ದಾರೆ.ಉಪಾಧ್ಯಕ್ಷರಾಗಿ ಪುಪ್ಪರಾಜ ಶೆಟ್ಟಿ ಜಾನ್ ಅರ್ವಿನ್ ಡಿಸೋಜ, ಮಂಜುನಾಥ ರೈ ಜತೆ ಕಾರ್ಯದರ್ಶಿಯಾಗಿ ಸಂತೋಷ್ ಹೆಗ್ಡೆ ಜತೆ ಕೋಶಾಧಿಕಾರಿಯಾಗಿ ಹರೀಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಸಲಹೆಗಾರರಾಗಿ ಪ್ರಮೋದ್ ಆರ್ ನಾಯಕ್, ವಿ.ಪಿ.ಜಾಯ್ ಮತ್ತು ವಿಶ್ವನಾಥ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಜೂ.24 ರಂದು ಬೆಳ್ತಂಗಡಿ ಜೆಸಿಐ ಮಂಜುಶ್ರೀ ಭವನದಲ್ಲಿ ಪದಗ್ರಹಣ ನೆರವೇರಲಿದೆ.ಸೀನಿಯರ್ ಚೆಂಬರ್ ರಾಷ್ಟೀಯ ಅಧ್ಯಕ್ಷ ಎಸ್.ಎನ್.ಆರ್.ವರ್ಗಿಸ್ ವೈದ್ಯಾನ್‌ರವರು ಪದಗ್ರಹಣ ನೇರವೇರಿಸಲ್ಲಿದ್ದಾರೆ. ಸೀನಿಯರ್ ಚೇಂಬರ್ ನಿಕಟಪೂರ್ವ ರಾಷ್ಟೀಯ ಅಧಕ್ಷ ಡಾ. ಕೇದಿಗೆ ಅರವಿಂದ ರಾವ್, ಸೀನಿಯರ್ ಚೇಂಬರ್ ರಾಷ್ಟೀಯ ಉಪಾಧ್ಯಕ್ಷ ಹರಿಪ್ರಸಾದ್ ರೈ, ರಾಷ್ಟೀಯ ಸೀನಿಯರ್ ಚೇಂಬರ್ ಆಡಳಿತ ಸಮಿತಿಯ ಸದಸ್ಯ ಡಾ. ಪ್ರಮೋದ್ ಆರ್ ನಾಯಕ್, ಬೆಳ್ತಂಗಡಿ ಸಾರ್ವಜನಿಕ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಚಂದ್ರಕಾಂತ್, ಬೆಳ್ತಂಗಡಿ ಶಿಕ್ಷಣಾಧಿಕಾರಿ ವಿರೂಪಾಕ್ಷ ಭಾಗವಹಿಸಲಿದ್ದಾರೆ.

Exit mobile version