Site icon Suddi Belthangady

ಸುರ್ಯ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿ ಡಾ.ಸತೀಶ್ಚಂದ್ರ ನೇಮಕ

ನಡ : ನಡ ಗ್ರಾಮದ ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರರಾಗಿ ಡಾ.ಸತೀಶ್ಚಂದ್ರ ಸುರ್ಯಗುತ್ತು ನೇಮಕಗೊಂಡಿದ್ದಾರೆ.

ದೇವಸ್ಥಾನದ ಪ್ರಧಾನ ಪುರೋಹಿತರಾದ ಅನಂತ್ರಮಯ್ಯ ಅವರಿಂದ ಸತೀಶ್ಚಂದ್ರ ಇವರು ಆಡಳಿತ ಮೊಕ್ತೇಸರಿಕೆ ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ನಡಗುತ್ತು ಧನಂಜಯ್ ಅಜ್ರೀ, ಚಂದ್ಕೂರ್ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ, ಉಜಿರೆ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪದ್ವೆಟ್ನಾಯ , ರಾಜಶೇಖರ್ ಅಜ್ರಿ, ಮುನಿರಾಜ ಅಜ್ರಿ, ಸಂಗ್ರಾಮ್ ಸುರ್ಯಗುತ್ತು, ಸುಕೀರ್ತಿ ಅಜ್ರಿ, ಸುರ್ಯ ಗುತ್ತು ಕುಟುಂಬಸ್ಥರು, ಉಪಸ್ಥಿತರಿದ್ದರು.

Exit mobile version