Site icon Suddi Belthangady

ನ್ಯಾಯತರ್ಪು: ಶಿಲ್ಪಿ ಜಯಚಂದ್ರ ಆಚಾರ್ಯ ರಚಿಸಿದ ಚಂದ್ರ ಮಂಡಲ ತೇರು ತಮಿಳುನಾಡಿಗೆ

ನ್ಯಾಯತರ್ಪು: ಇಲ್ಲಿಯ ದೇವಿ ನಗರ ಜನತಾ ಕಾಲೋನಿ ಶಿಲ್ಪಿ ಜಯಚಂದ್ರ ಆಚಾರ್ಯ ರಚಿಸಿದ ಚಂದ್ರ ಮಂಡಲ ತೇರನ್ನು ಜೂ.17 ರಂದು ತಮಿಳುನಾಡಿಗೆ ಕೊಂಡೊಯ್ಯಲಾಯಿತು.
ತಮಿಳುನಾಡಿನ ಕಾಟೂಮೂನ್ನೂರುಕೊಯಲ್ ಕಂಜಿವೇಲು ಗ್ರಾಮಸ್ಥರು ಆರಾದಿಸಿ ಕೊಂಡು ಬರುತ್ತಿರುವ ಶ್ರೀ ಗುರು ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕ ಚಂದ್ರ ಮಂಡಲ ತೇರನ್ನು ಶಿಲ್ಪಿಗಳ ವಿಧಿ-ವಿಧಾನಗಳೊಂದಿಗೆ ಕಳುಹಿಸಿ ಕೊಡಲಾಯಿತು. ಈಗಾಗಲೇ ಕೆಲವೊಂದು ದೇವಸ್ಥಾನಕ್ಕೆ ರಥಗಳನ್ನು ರಚಿಸಿ ಕೊಡಲಾಗಿದೆ ಎಂದು ಶಿಲ್ಪಿಯವರು ತಿಳಿಸಿದರು.

Exit mobile version