Site icon Suddi Belthangady

ಮಡಂತ್ಯಾರು: ವರ್ತಕ ಬಂಧು ಸಹಕಾರ ಸಂಘದ ಅಧ್ಯಕ್ಷರಾಗಿ ಜಯಂತ ಶೆಟ್ಟಿ.ಬಿ, ಉಪಾಧ್ಯಕ್ಷರಾಗಿ ಯೋಗೀಶ್ ಕಡ್ತಿಲ ಅವಿರೋಧ ಆಯ್ಕೆ

ಮಡಂತ್ಯಾರು: ವರ್ತಕರಿಂದ ವರ್ತಕರಿಗಾಗಿ ವರ್ತಕರಿಂದ ಪ್ರವರ್ತಿಸಲ್ಪಟ್ಟ ವರ್ತಕ ಬಂಧು ಸಹಕಾರ ಸಂಘ ಮಡಂತ್ಯಾರು ಇದರ ನಿರ್ದೇಶಕರಾಗಿ 17 ಮಂದಿ ವರ್ತಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಗಳಾಗಿ ಆಗಮಿಸಿದ್ಧ ಸಹಕಾರ ಅಭಿವೃದ್ಧಿ ಅಧಿಕಾರಿಯವರಾದ ಪ್ರತಿಮಾರವರು ಘೋಷಿಸಿರುತ್ತಾರೆ.
ನಿರ್ದೇಶಕರುಗಳಾಗಿ ಜಯಂತ ಶೆಟ್ಟಿ ಬಿ, ಯೋಗೀಶ್ ಕುಮಾರ್ ಕಡ್ತಿಲ, ವಿಜಯಚಂದ್ರ ಮಾಲಾಡಿ, ಹೈದರ್, ಕಾಂತಪ್ಪ ಗೌಡ, ಗಿರೀಶ್ ಪೈ, ಪ್ರಶಾಂತ್ ಶೆಟ್ಟಿ, ತುಳಸಿದಾಸ್ ಪೈ, ಯಶೋಧರ ಬಂಗೇರ, ಕಿಶೋರ್ ಶೆಟ್ಟಿ, ವಿನೋದ್ ಬಾಳಿಗ, ಉದಯಕುಮಾರ್ ಜೈನ್, ಅಶೋಕ್ ಭವಾನಿ, ಗೋಪಾಲಕೃಷ್ಣ ಕೆ, ತೆಲ್ಮಾ ಮಾಡ್ತಾ, ಅಮಿತಾ ಲೋಬೊ, ಡಿಗ್ನಾ ಮೊರಾಸ್ ಆಯ್ಕೆ ಮಾಡಲಾಗಿದೆ.

ಅದೇ ರೀತಿ ಪ್ರವರ್ತಕರಾಗಿ ಸಂಘದ ಪ್ರಾರಂಭಿಕ ಷೇರುಗಳನ್ನು ಖರೀದಿಸಿ ಸಹಕರಿಸಿ ಮಾರ್ಗದರ್ಶನ ನೀಡಿ ಗೌರವ ಸಲಹೆಗಾರರಾಗಿ ಹಿರಿಯ ವರ್ತಕರಾದ ಅನಿಲ್ ಕುಮಾರ್ ಅಧಿಕಾರಿ, ರವೀಂದ್ರ ಬಾಳಿಗ, ಜವಹರಾಲಿ ಸಾಹೇಬ್, ರಾಜೇಶ್ ರೋಡ್ರಿಗಸ್, ವಾಸುದೇವ ಗೌಡ, ರತ್ನಾಕರ ಶೆಟ್ಟಿ, ಓಂ ಪ್ರಸಾದ್, ಜಯಪ್ರಕಾಶ್ ಇವರನ್ನು ಆಯ್ಕೆ ಮಾಡಲಾಗಿದೆ

Exit mobile version