Site icon Suddi Belthangady

ಬೆಳ್ತಂಗಡಿ: ನಾವರದ ಗೋಳಿಕಟ್ಟೆಯಲ್ಲಿ ಮನೆಯೊಂದರ ಬೆಡ್ ರೂಂ ಸೇರಿದ್ದ ಕಾಳಿಂಗ ಸರ್ಪ- ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಲಾಯಿಲದ ಸ್ನೇಕ್ ಅಶೋಕ್

ಬೆಳ್ತಂಗಡಿ: ನಾವರ ಗ್ರಾಮದ ಗೋಳಿಕಟ್ಟೆಯಲ್ಲಿ ಕಾಳಿಂಗ ಸರ್ಪವನ್ನು ಉರಗ ತಜ್ಞ ಅಶೋಕ್ ಲಾಯಿಲ ರಕ್ಷಣೆ ಮಾಡಿದ್ದಾರೆ. ಗೋಳಿಕಟ್ಟೆಯಲ್ಲಿ ದಿನೇಶ್ ಕುಮಾರ್ ಅವರ ಮನೆಯೊಳಗೆ ಕಾಳಿಂಗ ಸರ್ಪ ಸೇರಿಕೊಂಡಿತ್ತು.ಇದನ್ನು ಗಮನಿಸಿದ ದಿನೇಶ್ ಅವರ ತಾಯಿ ದಿನೇಶ್ ಅವರಿಗೆ ತಿಳಿಸಿದಾಗ ಅವರು ಸ್ನೇಕ್‌ ಅಶೋಕ್ ಲಾಯಿಲ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು.

ಅಶೋಕ್ ಅವರು ಹಾವುನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

Exit mobile version