Site icon Suddi Belthangady

ಅನಂತೋಡಿ ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಪದಾಧಿಕಾರಿಗಳ ಆಯ್ಕೆ

ಬೆಳಾಲು: ಶ್ರೀ ಅನಂತೇಶ್ವರ ಭಜನಾ ಮಂಡಳಿ ಅನಂತೋಡಿ ಬೆಳಾಲು ಇದರ ವಾರ್ಷಿಕ ಮಹಾಸಭೆ ಹಾಗೂ ಲೆಕ್ಕಚಾರ ಮಂಡನೆಯು ಇತ್ತೀಚೆಗೆ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಭಜನಾ ಮಂಡಳಿಯ ಅಧ್ಯಕ್ಷರ ಸಮ್ಮುಖದಲ್ಲಿ ಜರಗಿತು.

ಈ ಸಂಧರ್ಭದಲ್ಲಿ ಭಜನಾ ಮಂಡಳಿಗೆ ನೂತನ ಪದಾಧಕಾರಿಗಳನ್ನು ಆಯ್ಕೆ ಮಾಡಲಾಯಿತು.ಅಧ್ಯಕ್ಷರಾಗಿ ನವೀನ ಗೌಡ ಕಂಬಳದಡ್ಡ, ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಪೋಸೋಟ್ಟು, ಕಾರ್ಯದರ್ಶಿಯಾಗಿ ವಿಘ್ನೇಶ್ ಗೌಡ ಅನಂತೋಡಿ, ಜತೆ ಕಾರ್ಯದರ್ಶಿಯಾಗಿ ಯಶೋಧರ ಗೌಡ ಅನಂತೋಡಿ, ಕೋಶಾಧಿಕರಿಯಾಗಿ ಹರಿಪ್ರಸಾದ್ ಅರಣೆಮಾರು, ಗೌರವಾಧ್ಯಕ್ಷರಾಗಿ ಗುರುರಾಜ್ ಓಡಿಪ್ರೊಟ್ಟು ಇವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಕಿರಣ್ ಸುವರ್ಣ ಇರಂತ್ಯಾರು, ಕಾಂತಪ್ಪ ಗೌಡ ಕಂಬಳದಡ್ಡ, ಲೀಲಾಧರ ಗೌಡ ಶಾಂತಿನಗರ, ಅಶೋಕ ಪೂಜಾರಿ ಓಡಿಪ್ರೊಟ್ಟು, ರಮಿತ್ ಗೌಡ ಅರಣೆಮಾರು, ರಾಜೇಶ್ ಇವರನ್ನು ಆಯ್ಕೆ ಮಾಡಲಾಯಿತು.ಹರೀಶ್ ನಾಯ್ಕ ಕುದ್ದಂಟೆ ಇವರು ಭಜನಾ ಮಂಡಳಿಯ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.

ಗೌರವ ಸಲಹೆಗಾರರಾಗಿ ಜಾರಪ್ಪ ಗೌಡ ಅರಣೆಮಾರು, ಶ್ರೀನಿವಾಸ ಗೌಡ ಶ್ರೀ ಸೌಧ, ನಾರಾಯಣ ಗೌಡ ಎಳ್ಳುಗದ್ದೆ, ಸೀತಾರಾಮ ಬಿ.ಎಸ್, ಸುಂದರ ಎಂ.ಕೆ, ಜಯಂತ ಆಚಾರ್ಯ ಕೊರ್ಧೋಟ್ಟು, ಸುರೇಶ್ ಸಾಲ್ಯಾನ್ ಉಪ್ಪಾರು, ಡೀಕಯ್ಯ ಗೌಡ ಅರಣೆಮಾರು, ಗಂಗಾಧರ ಗೌಡ ಅನಂತೋಡಿ ಇವರನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಸದಸ್ಯರಾಗಿ ಗಣೇಶ್ ಅನಂತೋಡಿ, ಹರೀಶ್ ಗೌಡ ಮುಂಡೆತ್ಯಾರು, ಯಶೋಧರ ಗೌಡ ಅನಂತೋಡಿ, ಸತೀಶ್ ಗೌಡ ಎಳ್ಳುಗದ್ದೆ, ಪ್ರೀತಮ್ ಎಳ್ಳುಗದ್ದೆ, ಪ್ರವೀಣ್ ಅನಂತೋಡಿ, ಸುಮಿತ್ ಆಚಾರ್ಯ, ದಿನೇಶ್ ಮರುವದಡಿ, ಶಶಿಧರ ಓಡಿಪ್ರೊಟ್ಟು,ಗಿರೀಶ್,ತಾರಾನಾಥ,ಜನಾರ್ದನ ನಾಯ್ಕ, ಪದ್ಮನಾಭ, ಹರೀಶ್ ಕುಮಾರ್, ಪುರಂದರ ಇವರನ್ನು ಆಯ್ಕೆ ಮಾಡಲಾಯಿತು.

ಹರೀಶ್ ನಾಯ್ಕ ಕುದ್ದಂಟೆ ಕಾರ್ಯಕ್ರಮ ನಿರೂಪಿಸಿ, ಸತೀಶ್ ಗೌಡ ಎಳ್ಳುಗದ್ದೆ ಸ್ವಾಗತಿಸಿ, ವಿಘ್ನೇಶ್ ಗೌಡ ಅನಂತೋಡಿ ವಂದಿಸಿದರು.

Exit mobile version