Site icon Suddi Belthangady

ಪೆರಿಂಜೆ: ಪಡ್ಯಾರಬೆಟ್ಟ ಕ್ಷೇತ್ರದಿಂದ ಪುಸ್ತಕ ವಿತರಣೆ

ಪೆರಿಂಜೆ: ಶ್ರೀ ಕ್ಷೇತ್ರ ಪಡ್ಯಾರಬೆಟ್ಟ ಕೊಡಮಣಿತ್ತಾಯ ಮೂಲ ದೈವಸ್ಥಾನದ ವತಿಯಿಂದ ಹೊಸಂಗಡಿ, ಬಡಕೋಡಿ, ಮರೋಡಿ ಮತ್ತು ಕೊಕ್ರಾಡಿ ಗ್ರಾಮಗಳ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ವಿತರಣೆ ಮತ್ತು ವಿವಿಧ ಶಾಲೆಗಳಗೆ ಅತಿಥಿ ಶಿಕ್ಷಕರ ನಿಯೋಜನೆ ಕಾರ್ಯಕ್ರಮ ಜೂ.12 ರಂದು ಪೆರಿಂಜೆ ‘ಸಂತೃಪ್ತಿ’ ಸಭಾಭವನದಲ್ಲಿ ನಡೆಯಿತು. ಮಾರೂರು ಖಂಡಿಗ ರಾಮದಾಸ ಅಸ್ರಣ್ಣ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಕ್ಷೇತ್ರದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ್ ಯಾನೆ ಕಂಚಿಪೂವಣಿ ವಹಿಸಿದ್ದರು.ಶಾಸಕ ಹರೀಶ್ ಪೂಂಜ ಪುಸ್ತಕ ವಿತರಿಸಿದರು.

ಮುಖ್ಯ ಅತಿಥಿಗಳಾಗಿ ಹೊಸಂಗಡಿ ಕರುಣಾಕರ ಪೂಜಾರಿ, ಪೆರಾಡಿ ಪ್ರಾ. ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಪ್ರಗತಿಪರ ಕೃಷಿಕ ಸೀತಾರಾಮ ರೈ, ವೇಣೂರಿನ ಉದ್ಯಮಿ ಭಾಸ್ಕರ ಪೈ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ವ್ಯಾಪ್ತಿಯ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಊರವರು ಉಪಸ್ಥಿತರಿದ್ದರು. ಹೊಸಂಗಡಿ ಗ್ರಾಮ ಪಂಚಾಯತ್ ಪಿಡಿಒ ಗಣೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ, ಗೌರವ ಶಿಕ್ಷಕಿಯರಿಗೆ ಆದೇಶ ಪತ್ರ ವಿತರಣೆ, ಸುಲ್ಕೆರಿ ಶ್ರೀ ರಾಮ ಶಾಲೆಗೆ ರೂ.50 ಸಾವಿರ ದೇಣಿಗೆಯನ್ನು ನೀಡಲಾಯಿತು.

Exit mobile version