Site icon Suddi Belthangady

ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಇಬ್ಬರಿಗೆ ಎಂ.ಜೆ.ಎಫ್ ಗೌರವ

ಬೆಳ್ತಂಗಡಿ: ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಪೂರ್ವಾಧ್ಯಕ್ಷ ವಸಂತ ಶೆಟ್ಟಿ ಶ್ರದ್ಧಾ ಹಾಗೂ ಸದಸ್ಯ ಧರ್ಮಸ್ಥಳದ ಪ್ರಭಾಕರ ಗೌಡ ಬೊಲ್ಮ ಇವರಿಗೆ ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯಿಂದ ಎಂ.ಜೆ.ಎಫ್ ಗೌರವ ಲಭಿಸಿದೆ.ಇತ್ತೀಚೆಗೆ ಮಂಗಳೂರು ಟಿ.ಎಂ.ಎ. ಪೈ ಕನ್ವೆನ್ಷನ್ ಸಭಾಂಗಣದಲ್ಲಿ ಜರಗಿದ ಲಯನ್ಸ್ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಲಯನ್ಸ್ ಕಳೆದ ಸಾಲಿನ ಅಧ್ಯಕ್ಷ ಡಾಗ್ಲಾಸ್ ಅಲೆಕ್ಸಡರ್ ಪ್ರಧಾನ ಮಾಡಿದರು. ಜಿಲ್ಲಾ ರಾಜ್ಯಪಾಲ ಸಂಜೀತ್ ಶೆಟ್ಟಿ ಹಾಗೂ ಲಯನ್ಸ್ ಜಿಲ್ಲಾ ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಸಂತ್ ಶೆಟ್ಟಿ ಶ್ರದ್ಧಾ ರವರು ಪ್ರಸ್ತುತ ಲಯನ್ಸ್ ಪ್ರಾಂತೀಯ ಅಧ್ಯಕ್ಷರಾಗಿರುತ್ತಾರೆ.ಪ್ರಭಾಕರ ಗೌಡರವರು ಧರ್ಮಸ್ಥಳ ಸಿ.ಎ.ಬ್ಯಾಂಕ್ ನಿರ್ದೇಶಕರಾಗಿರುತ್ತಾರೆ.ಎಂ.ಜೆ.ಎಫ್ ದೇಣಿಗೆಯಿಂದಾಗಿ ಈ ವರ್ಷ ಲಯನ್ಸ್ ಜಿಲ್ಲೆಗೆ ಸುಮಾರು 11ಡಯಲಿಸಿಸ್ ಘಟಕಗಳು ಲಭ್ಯವಾಗಲಿದೆ.

Exit mobile version