Site icon Suddi Belthangady

ಚಾರ್ಮಾಡಿ ಘಾಟ್‌ನಲ್ಲಿ ಮೃತದೇಹ ಪತ್ತೆ

ಬೆಳ್ತಂಗಡಿ: ಚಾರ್ಮಾಡಿ ಘಾಟ್‌ನಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ವ್ಯಾಾಪ್ತಿಯ ಕುಕ್ಕಾಜೆ ನಿವಾಸಿ ಸವಾದ್(35) ಎಂಬವರ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸವಾದ್ ಎಂಬವರು 10 ದಿನಗಳ ಹಿಂದೆ ನಾಪತ್ತೆಯಾಗಿದ್ದರು.ಅವರು ಗಾಂಜ ವ್ಯಸನಿಯಾಗಿದ್ದು, ಈ ಹಿಂದೆ ಹಲವು ಬಾರಿ ನಾಪತ್ತೆಯಾಗಿ ಕೆಲ ದಿನಗಳ ಬಳಿಕ ಮನೆಗೆ ವಾಪಸ್ಸಾಾಗುತ್ತಿದ್ದರು.ಆದ್ದರಿಂದ ಈ ಬಾರಿಯೂ ಅದೇ ರೀತಿ ಆಗಿರಬಹುದೆಂದು ಮನೆಯವರು ಊಹಿಸಿದ್ದರು.
ಸವಾದ್ ಜೊತೆ ಇರುತ್ತಿದ್ದ ಮಾರಿಪಳ್ಳದ ವ್ಯಕ್ತಿಯೋರ್ವ ಸವಾದ್ ಅಣ್ಣನಿಗೆ ಕರೆ ಮಾಡಿ ನಿಮ್ಮ ತಮ್ಮ ಚಾರ್ಮಾಡಿಯಲ್ಲಿ ಕೊಲೆಯಾಗಿದ್ದಾನೆ ಎಂದು ತಿಳಿಸಿದ್ದರು.ಈ ಬಗ್ಗೆ ವಿಚಾರಿಸಿದಾಗ ಮನೆಯವರಿಗೆ ಚಾರ್ಮಾಡಿಯಲ್ಲಿ ಮೃತದೇಹ ಪತ್ತೆಯಾಗಿರುವ ಮಾಹಿತಿ ಲಭಿಸಿದೆ.ಮೃತದೇಹ ಪತ್ತೆಯಾಗಿರುವ ಸ್ಥಳ ಚಿಕ್ಕಮಗಳೂರು ಜಿಲ್ಲೆ ವ್ಯಾಾಪ್ತಿಗೆ ಸೇರಿರುವುದರಿಂದ ಬಣಕಲ್ ಠಾಣೆಗೆ ತೆರಳಿ ಮನೆಯವರು ವಿಚಾರಿಸಿದಾಗ ಮೈ ಮೇಲೆ ಇರುವ ಬಟ್ಟೆ ಹಾಗೂ ಕೈಯಲ್ಲಿರುವ ನೂಲನ್ನು ಆಧರಿಸಿ ಮೃತದೇಹ ಸವಾದ್ ಅವರದ್ದೇ ಎಂದು ಅಭಿಪ್ರಾಾಯಪಟ್ಟಿದ್ದಾರೆ.
ಸವಾದ್‌ನೊಂದಿಗೆ ಇದ್ದ ಮೂವರು ಆತನನ್ನು ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ.ಮೃತದೇಹವನ್ನು ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ವರದಿ ಬಳಿಕ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಬಣಕಲ್ ಠಾಣೆಯಲ್ಲಿ ಅಸಹಜ ಸಾವಿನ ಕುರಿತು ಪ್ರಕರಣ ದಾಖಲಾಗಿದೆ.ಮನೆಯವರು ಮೃತದೇಹವನ್ನು ನೋಡಿ ಶೇ.100ರಷ್ಟು ಹೋಲಿಕೆಯಿದೆ ಎಂದು ತಿಳಿಸಿದ್ದಾರೆ. ಶೇ.100ರಷ್ಟು ಹೋಲಿಕೆಯಾಗದಿದ್ದರೆ ಡಿಎನ್ಎ ಪರೀಕ್ಷೆ ಮಾಡಿ ಶವ ಸವಾದ್ ಅವರದ್ದೇ ಆಗಿದ್ದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಬಣಕಲ್ ಠಾಣಾ ಪೊಲೀಸ್ ನಿರೀಕ್ಷಕರು ತಿಳಿಸಿದ್ದಾರೆ.

Exit mobile version