Site icon Suddi Belthangady

ವೇಣೂರಿನ ಕಾರು ಚಾಲಕ ಭೈರಣ್ಣ ನಿಧನ

ವೇಣೂರು: ಅಂಬಾಸಿಡರ್ ಕಾರು ಚಲಾಯಿಸಿ ವೇಣೂರಿನ ಜನತೆಗೆ ಆಪದ್ಭಾಂಧವರಾಗಿ ಕಳೆದ ನಾಲೈದು ದಶಕಗಳಲ್ಲಿ ಸೇವೆ ನೀಡುತ್ತಿದ್ದ ಚಾಲಕ ಬೈರಣ್ಣ (84) ಅವರು ಜೂ.9 ರಂದು ಹೃದಯಾಘಾತದಿಂದ ವೇಣೂರು ಕೆಳಗಿನ ಪೇಟೆಯ ಬಾಡಿಗೆ ಮನೆಯಲ್ಲಿ ನಿಧನ ಹೊಂದಿದರು.
ಮೂಲತಃ ಮಂಗಳೂರು ಗುರುಪುರದವರಾಗಿರುವ ಇವರು ಸರಿಸುಮಾರ 1976ರಲ್ಲಿ ವೇಣೂರಿನಲ್ಲಿ ಕಾರು ಚಾಲಕರಾಗಿ ವೃತ್ತಿ ಆರಂಭಿಸಿದ್ದರು.ಬಸ್, ವಾಹನಗಳ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿಯೂ ಅಂದು ಬೈರಣ್ಣನ ಅಂಬಾಸಿಡರ್ ಕಾರಿನಲ್ಲಿ ಪ್ರಯಾಣ ಮಾಡದಿರುವವರು ತುಂಬಾ ವಿರಳ ಎಂದೇ ಹೇಳಬಹುದು. ಸುಧೀರ್ಘ ಕಾಲದವರೆಗೂ ವೇಣೂರಿನಲ್ಲಿ ಅಂಬಾಸಿಡರ್ ಕಾರು ಚಲಾಯಿಸಿ ಅದೆಷ್ಟೋ ರೋಗಿಗಳಿಗೆ, ಗರ್ಭಿಣಿಯವರಿಗೆ ಆಪದ್ಭಾಂಧವರಾದವರು.ಇವರ ಕಾರಿನಲ್ಲಿ ಮಕ್ಕಳನ್ನು ಕೂರಿಸಲು ಪೋಷಕರೂ ಹಿಂದೇಟು ಹಾಕುತ್ತಿರಲಿಲ್ಲ.

Exit mobile version