Site icon Suddi Belthangady

ಎಸ್.ಐ. ಶ್ರೀಶೈಲ ಮತ್ತೆ ಕಾಪು ಪೊಲೀಸ್ ಠಾಣೆಗೆ ವರ್ಗಾವಣೆ

ಬೆಳ್ತಂಗಡಿ: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಉಡುಪಿ ಕಾಪು ಠಾಣೆಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದ ಎಸ್.ಐ. ಶ್ರೀಶೈಲ ಡಿ.ಮುರುಗೋಡ್ ಅವರು ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಮತ್ತೆ ಕಾಪು ಠಾಣೆಗೆ ವರ್ಗಾವಣೆಗೊಂಡಿದ್ದಾರೆ.


ಶ್ರೀಶೈಲ ಡಿ ಅವರು ಎ.ಎಸ್.ಐ. ವೆಂಕಟೇಶ್ ಅವರಿಗೆ ಅಧಿಕಾರ ಹಸ್ತಾಂತರಿಸಿ ಕಾಪು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸಿಬ್ಬಂದಿಗಳಾದ ರವೀಂದ್ರ, ಪ್ರಶಾಂತ್, ಅಭಿಜಿತ್, ಸತ್ಯಪ್ರಕಾಶ್ ಮತ್ತು ಶ್ರೀನಿವಾಸ್ ಅವರು ಶ್ರೀಶೈಲ ಅವರನ್ನು ಠಾಣೆಯಲ್ಲಿ ಗೌರವಿಸಿದರು.

Exit mobile version