Site icon Suddi Belthangady

ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ಮುಂಡಾಜೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅಶೋಕ ಕುಮಾರ್ ಕುಟುಂಬಕ್ಕೆ ರೂ 1.50 ಲಕ್ಷ ಚೆಕ್ ಹಸ್ತಾಂತರ

ಬೆಳ್ತಂಗಡಿ: ಮುಂಡಾಜೆ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಅಶೋಕ ಕುಮಾರ್ ಅವರು ರಸ್ತೆ ಅಪಘಾತದಲ್ಲಿ ಮಾ.7ರಂದು ನಿಧನರಾಗಿದ್ದು ಅವರ ಮನೆಯವರಿಗೆ ಮಂಗಳೂರು ಹಾಲು ಒಕ್ಕೂಟದ ನೌಕರರ ಟ್ರಸ್ಟಿನ ವತಿಯಿಂದ ರೂ.1,50,000 ವನ್ನು ಮಂಗಳೂರು ಹಾಲು ಒಕ್ಕೂಟದ ಅಧ್ಯಕ್ಷರು ಸುಚರಿತ ಶೆಟ್ಟಿಯವರು ಅಶೋಕ ಕುಮಾರ್ ಅವರ ತಂದೆಯವರಾದ ರಾಮಚಂದ್ರ ಹೆಗಡೆಯವರಿಗೆ ಚೆಕ್ ಮೂಲಕ ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ ಜಯರಾಮ ರೈ, ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ, ಸುಧಾಕರ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಅಶೋಕ್, ಮ್ಯಾನೇಜರ್ ನಿತ್ಯಾನಂದ ಭಕ್ತರವರು ಡಿ.ಎಂ ಸತೀಶ್ ರಾವ್, ಪಶುವೈದ್ಯಾಧಿಕಾರಿ ಡಾ॥ ಗಣಪತಿ, ಹಾಲು ಉತ್ಪಾದಕರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಬಿ ಮೊಹಮ್ಮದ್ ಷರೀಫ್, ನೌಕರರ ರಾಜ್ಯ ಪ್ರತಿನಿಧಿ ಮೇಬಲ್ ಕ್ರಾಸ್ತ ಹಾಗೂ ಒಕ್ಕೂಟದ ನೌಕರರ ಟ್ರಸ್ಟ್ ನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮತ್ತು ಮುಂಡಾಜೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆಯವರು ಉಪಸ್ಥಿತರಿದ್ದರು.

Exit mobile version