Site icon Suddi Belthangady

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೇಜಿ ನಾಟಿ ಕಾರ್ಯಕ್ರಮ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಜೂ.2ರಂದು ಪೂರ್ವಾಹ್ನ ಸ್ಥಳೀಯ ದೇವಸ್ಥಾನದ ಆಡಳಿತ ಮಂಡಳಿಯ ವತಿಯಿಂದ ನೇಜಿ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ರಾವ್, ಸಮಿತಿ ಸದಸ್ಯರಾದ ನೀಲಯ್ಯ ಗೌಡ, ರಘುಚಂದ್ರ ಪೂಜಾರಿ, ಪದ್ಮಯ್ಯ ಗೌಡ ಸೀಂಬೂಳು ಮತ್ತು ಸ್ಥಳೀಯ ರೈತ ಮಹಿಳೆಯರಾದ ಗೌರಿ, ರೋಹಿಣಿ ರೈ, ವಸಂತಿ, ವಿಮಲ, ಮೀನಾಕ್ಷಿ ರೈ, ಚಂದಮ್ಮ ಉಪಸ್ಥಿತರಿದ್ದರು.

ಕಳೆದ ವರ್ಷವೂ ಕೂಡ ಇದೇ ರೀತಿ ನೇಜಿ ನಾಟಿ ಕಾರ್ಯಕ್ರಮ ಮಾಡಿ ಜಿಲ್ಲೆಯ ಬೇರೆ-ಬೇರೆ ದೇವಸ್ಥಾನ ಮತ್ತು ದೈವಸ್ಥಾನಗಳಿಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಭತ್ತದ ತೆನೆಯನ್ನು ಉಚಿತವಾಗಿ ವಿತರಿಸಲಾಗಿತ್ತು.

Exit mobile version