Site icon Suddi Belthangady

ಧರ್ಮಸ್ಥಳ: ಕಲ್ಲೇರಿಯಲ್ಲಿ ಕಾರು-ಆಕ್ಟಿವಾ-ರಿಕ್ಷಾ ಸರಣಿ ಅಪಘಾತ: ತಪ್ಪಿದ ದುರಂತ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಕಲ್ಲೇರಿಯಲ್ಲಿ ಸುಬ್ರಮಣ್ಯದಿಂದ ಧರ್ಮಸ್ಥಳ ಕಡೆಗೆ ಬರುವ ಕಾರು ನಿಯಂತ್ರಣ ತಪ್ಪಿ ಕಲ್ಲೇರಿಯ ರಸ್ತೆ ಬದಿಯಲ್ಲಿ ನಿಲ್ಲಿಸಿದ ಎರಡು ಆಕ್ಟಿವಾ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಘಟನೆ ಜೂನ್.5ರಂದು ಸಂಜೆ ನಡೆದಿದೆ.

ಕಾರು ಚಾಲಕನ ನಿರ್ಲಕ್ಷ್ಯದಿಂದಾಗಿ ನಿಲ್ಲಿಸಿದ್ದ ಗಾಡಿಗಳು ತುಂಬಾ ಹಾನಿಯಾಗಿದೆ.ಕಾರು ಅಲ್ಲಿ ಸಮೀಪದ ಗೂಡಂಗಡಿ ಒಂದರ ಎದುರು ಬಂದು ನಿಂತಿದ್ದು ದೊಡ್ಡ ಅಪಾಯ ತಪ್ಪಿದೆ.
ಘಟನಾ ಸ್ಥಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರು ಸೇರಿದ್ದು ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸಂಚಾರಕ್ಕೆ ಅಡಚಡನೆ ಉಂಟಾಯಿತು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version