Site icon Suddi Belthangady

ಧರ್ಮಸ್ಥಳ ಗ್ರಾ.ಪಂ. ನಲ್ಲಿ ಜೂ.3 ಪ್ರಧಾನಮಂತ್ರಿ ಜೀವನ್ ಜ್ಯೋತಿ ಸುರಕ್ಷಾ ಬಿಮಾ ಯೋಜನೆ ನೋಂದಾವಣೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಪ್ರಧಾನಮಂತ್ರಿ ಜೀವನ್ ಜ್ಯೋತಿ ಹಾಗೂ ಸುರಕ್ಷಾ ಬಿಮಾ ಯೋಜನೆ ನೋಂದಾವಣೆ ಜೂ. 03 ರಂದು 11.30 ಸರಿಯಾಗಿ ಧರ್ಮಸ್ಥಳ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ವಿಮೆ PMJJY ರೂ 436 ರೂ. (ಪ್ರಧಾನಮಂತ್ರಿ ಜೀವನ್ ಜ್ಯೋತಿ) ಯೋಜನೆ ಮತ್ತು PMSBY 20 ರೂ. (ಪ್ರದಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ) ಗಳನ್ನು ಆರ್ಥಿಕ ಸಾಕ್ಷರತೆ ಸಮಾಲೋಚಕಿ ‘ಉಷಾ ಕಾಮತ್ ಇವರು ನೋಂದಣಿ ಮಾಡಿ ಕೊಡಲಿದ್ದಾರೆ.

ಸ್ತ್ರೀ ಶಕ್ತಿ,ಸಂಜೀವಿನಿ ಸ್ವ ಸಹಾಯ ಸಂಘಗಳ ಸದಸ್ಯರು, ಗ್ರಾಮಸ್ಥರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿಮೆಯ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿಯನ್ನು ಮಾಡಿದ್ದಾರೆ. ನೋಂದಣಿಗೆ ಬೇಕಾದ ದಾಖಲೆಗಳು ಆಧಾರ್ ಜೆರಾಕ್ಸ್, ರಾಷ್ಟ್ರೀಕೃತ ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.

Exit mobile version