Site icon Suddi Belthangady

ಯುವತಿಯ ಮಾನಭಂಗ,ಕಿಡ್ನಾಪ್ ಪ್ರಕರಣ-ಆರೋಪಿ ಉದ್ಯಮಿ ಪ್ರಭಾಕರ ಹೆಗ್ಡೆಗೆ ಜಾಮೀನು ಮಂಜೂರು

ಬೆಳ್ತಂಗಡಿ: ಯುವತಿಯ ಮಾನಭಂಗ, ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉದ್ಯಮಿ ಪ್ರಭಾಕರ್ ಹೆಗ್ಡೆಯವರಿಗೆ ಜಾಮೀನು ಮಂಜೂರಾಗಿದೆ.

ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಮಂಜೂರಾಗಿದ್ದು, ಇದೇ ಹಿನ್ನಲೆಯಲ್ಲಿ ಬೆಳ್ತಂಗಡಿ ನ್ಯಾಯಾಲಯದಲ್ಲೂ ಕೂಡ ಜಾಮೀನು ಮಂಜೂರಾಗಿದೆ.
ಮೇ 14ರಂದು ತಮ್ಮ ಟೆಕ್ಸ್ ಟೈಲ್ ಶಾಪ್ ಗೆ ಕೆಲಸಕ್ಕೆಂದು ಬಂದಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾಗಿ ಪ್ರಭಾಕರ್ ಹೆಗ್ಡೆಯವರ ವಿರುದ್ಧ ಕಿಡ್ನಾಪ್,ಮಾನಭಂಗ ಕೇಸ್ ದಾಖಲಾಗಿತ್ತು. ಇದೀಗ ಆರೋಪಿಗೆ ಜಾಮೀನು ಮಂಜೂರಾಗಿದೆ.

Exit mobile version