Site icon Suddi Belthangady

ಅಳದಂಗಡಿ: ದಿ|ಸುಶೀಲ ಪೂಜಾರ್ತಿ ಇವರ ಪ್ರಥಮ ವರ್ಷದ ಪುಣ್ಯಸ್ಮರಣೆ

ಅಳದಂಗಡಿ:ಕರಂಬಾರು ಗ್ರಾಮದ ಊರ ನಿವಾಸಿ ದಿ| ಸುಶೀಲ ಇವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಮೇ 31ರಂದು ಊರ ಸ್ವಗೃಹದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅವರ ಸವಿನೆಪಿಗಾಗಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊನ್ನಯ್ಯ ಕುಲಾಲ್ ಇವರ ಶ್ರೀ ಗುರು ಚೈತನ್ಯ ವೃದ್ದಾಶ್ರಮಕೆ ಭೇಟಿ ನೀಡಿ ಹಣ್ಣು ಹಂಪಲು ವಿತರಿಸಿ ದೇಣಿಗೆ ನೀಡಲಾಯಿತು ಮತ್ತು ಅಶಕ್ತ ಕುಟುಂಬಗಳಿಗೆ ದಿನ ಬಳಕೆಯ ಆಹಾರ ಸಾಮಗ್ರಿ ವಿತರಿಸಿ ಆರೋಗ್ಯ ನಿಧಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪುತ್ರರಾದ ಉದ್ಯಮಿ ಸುರೇಶ್ ಪೂಜಾರಿ ಊರ ಮತ್ತು ಸಹೋದರರು ,ಮತ್ತು ಕುಟುಂಬಸ್ಥರು ಮತ್ತು ಶಾಸಕ ಹರೀಶ್ ಪೂಂಜಾ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಹಾಗೂ ಬಿಜೆಪಿ ಮಂಡಲ ಪದಾಧಿಕಾರಿಗಳು, ಸುರೇಶ್ ಪೂಜಾರಿ ಅಭಿಮಾನಿ ಬಳಗದ ಸರ್ವ ಸದಸ್ಯರು ಉಪಸ್ಥಿತರಿದ್ದರು. ಆಗಮಿಸಿದ ಗಣ್ಯ ಅತಿಥಿಗಳನ್ನು ಸದಾನಂದ ಪೂಜಾರಿ ಉಂಗಿಲಾಬೈಲ್ ಇವರು ಸ್ವಾಗತಿಸಿದರು.

Exit mobile version