Site icon Suddi Belthangady

ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ನೃತ್ಯ ಭಜನಾ ಸೇವೆ

ಬೆಳ್ತಂಗಡಿ: ಬಯಲು ಆಲಯ ಗಣಪತಿ ಎಂದೇ ಪ್ರಸಿದ್ಧಿ ಪಡೆದಿರುವ ಸೌತಡ್ಕ ಮಹಾಗಣಪತಿ ದೇವಸ್ಥಾನದಲ್ಲಿ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದಿಂದ ನೃತ್ಯ ಭಜನಾ ಸೇವೆ ನಡೆಯಿತು.

ನಂತರ ದೇವಸ್ಥಾನದ ಸಮೀಪದಲ್ಲೇ ಇರುವ ಬೆನ್ನುಹುರಿ ಅಪಘಾತಗೊಳಗಾದ ಪುನಶ್ಚೇತನ ಕೇಂದ್ರ ಸೇವಾಧಾಮಕ್ಕೆ ತೆರಳಿದ ಭಜನಾ ತಂಡದವರು ಅಲ್ಲಿಯೂ ನೃತ್ಯ ಭಜನೆಯೊಂದಿಗೆ ಬೆನ್ನು ಮೂಳೆ ಚಿಕಿತ್ಸೆ ಪಡೆಯುತ್ತಿರುವವರ ಯೋಗ-ಕ್ಷೇಮ ವಿಚಾರಿಸಿ ದೇವರಲ್ಲಿ ಅವರ ಪರವಾಗಿ ಪ್ರಾರ್ಥಿಸಿದರು.

Exit mobile version