Site icon Suddi Belthangady

ಉಜಿರೆ: ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವು

ಉಜಿರೆ: ಹಲಸಿನ ಹಣ್ಣು ಕೀಳಲು ಮರ ಹತ್ತಿದ ವ್ಯಕ್ತಿ ಮರದಿಂದ ಬಿದ್ದು ಸಾವನ್ನಪ್ಪಿದ ಘಟನೆ ಉಜಿರೆ ಗ್ರಾಮದ ಕಾಶಿಬೆಟ್ಟು ಸಮೀಪದ ಅರಳಿ ಎಂಬಲ್ಲಿ ಮೇ 28 ಬೆಳಿಗ್ಗೆ ನಡೆದಿದೆ.

ಅರಳಿ ನಿವಾಸಿ ರಾಜೇಶ್ (45) ಎಂಬವರು ತನ್ನ ಅಕ್ಕನ ಮನೆಯಲ್ಲಿ ಹಲಸಿನ ಹಣ್ಣು ತೆಗೆಯಲೆಂದು ಮರ ಹತ್ತಿದ್ದು ಈ ಸಂದರ್ಭದಲ್ಲಿ ಮರಕ್ಕೆ ಇಟ್ಟಿದ್ದ ಏಣಿಯೊಂದಿಗೆ ಜಾರಿ ಬಿದ್ದು ಗಂಭೀರ ಗಾಯಗೊಂಡಿದ್ದು. ತಕ್ಷಣ ಅವರನ್ನು ಆಸ್ಪತ್ರೆಗೆ ಕೊಂಡುಹೋಗುವಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರ ಮನೆಯವರು ಮಾಹಿತಿ ನೀಡಿದ್ದಾರೆ. ಹಲಸಿನ ಮರದ ಸಮೀಪವೇ ವಿದ್ಯುತ್ ತಂತಿಯೂ ಹಾದು ಹೋಗಿದ್ದು ಅದೇನಾದರೂ ತಾಗಿ ಶಾಕ್ ಹೊಡೆದು ಅವಘಡ ಸಂಭವಿಸಿರಬಹುದೇ ಎಂದು ಇನ್ನಷ್ಟೆ ತಿಳಿದು ಬರಬೇಕಾಗಿದೆ.

Exit mobile version