Site icon Suddi Belthangady

ಓಡಿಲ್ನಾಳ: ಸಂಬೋಳ್ಯ ದೂಪದಬೆಟ್ಟು ದೈವಗಳ ಪ್ರತಿಷ್ಠೆ

ಓಡಿಲ್ನಾಳ: ಸಂಬೋಳ್ಯ ದೂಪದಬೆಟ್ಟು ಉಳ್ಳಾಲ್ತಿ ಮತ್ತು ಉಳ್ಳಾಕುಲು ದೈವ ಪ್ರತಿಷ್ಠೆ ಹಾಗೂ ಪರಿವಾರ ಸಹಿತ ಕೊಡಮಣಿತ್ತಾಯ,ರಕ್ತೇಶ್ವರಿ ಪಿಲಿಚಾಮುಂಡಿ ದೈವಗಳ ಪ್ರತಿಷ್ಠೆ ಮೇ. 23 ಹಾಗೂ 24 ರಂದು ಜರುಗಿತು.
ಮೇ.23 ರಂದು ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹವಾಚನ, ವಾಸ್ತು ಪೂಜೆ, ಬಲಿ, ಹೋಮ, ಸುದರ್ಶನ ಹೋಮ, ಅಘೋರ ಹೋಮ, ಬಿಂಬ ಶುದ್ದಿ, ಅಧಿವಾಸ, ಪ್ರಕಾರ ಬಲಿ,
ಮೇ.24 ರಂದು ಪುಣ್ಯಾಹವಾಚನ, ಗಣಪತಿ ಹೋಮ, ದೈವ ಪ್ರತಿಷ್ಠೆ, ಪಂಚ ಪರ್ವ ಕಲಶಾಭಿಷೇಕ ಪ್ರಸನ್ನಪೂಜೆ ಹಾಗೂ ಅನ್ನದಾನ ನಡೆಯಿತು.


ಕುಂಠಿನಿ ವೇದಮೂರ್ತಿ ರಾಘವೇಂದ್ರ ಭಾಂಗೀಣ್ಣಾಯರ ನೇತೃತ್ವದಲ್ಲಿ ಧಾರ್ಮಿಕ, ವೈದಿಕ,ವಿದಿ-ವಿಧಾನಗಳೊಂದಿಗೆ ನೆರವೇರಿತು.


ಸಮಿತಿ ಗೌರವ ಅಧ್ಯಕ್ಷ ವಿಠ್ಠಲ ಶೆಟ್ಟಿ ಉಪ್ಪಡ್ಕ, ಅಧ್ಯಕ್ಷ ಉಮೇಶ್ ಶೆಟ್ಟಿ ಸಂಬೋಳ್ಯ,ಕಾರ್ಯದರ್ಶಿ ದಿನೇಶ್ ನೈಾಕ್ ಸಂಬೋಳ್ಯ, ಕೋಶಾಧಿಕಾರಿ ಮೋಹನ ಗೌಡ ಹಾಗೂ ಸಂಜೀವ ಶೆಟ್ಟಿ ಕುಟುಂಬಸ್ಥರು ಮತ್ತು ಕಳಿಯ, ನ್ಯಾಯತರ್ಪು,ಓಡಿಲ್ನಾಳ,ಊರ,ಪರಊರ ಭಕ್ತಾದಿಗಳು ಆಗಮಿಸಿದರು.

Exit mobile version