Site icon Suddi Belthangady

ಮೇ 30: ಮೆಸ್ಕಾಂ ಜನ ಸಂಪರ್ಕ ಸಭೆ

ಬೆಳ್ತಂಗಡಿ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ಇದರ ಅಧೀಕ್ಷಕ ಇಂಜಿನಿಯರ್ ಮಂ.ವಿ.ಸ.ಕಂ.ನಿ. ಮತ್ತು ಕಾರ್ಯ ಪಾಲನ ವೃತ್ತ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಮೇ.30 ರಂದು ಜನಸಂಪರ್ಕ ಸಭೆ ಉಜಿರೆ ಉಪ ವಿಭಾಗೀಯ ಕಛೇರಿ, ಉಜಿರೆಯಲ್ಲಿ ನಡೆಯಲಿದೆ.

ಸಾರ್ವಜನಿಕರಿಂದ ಮೆಸ್ಕಾಂ ಉಜಿರೆ ಹಾಗೂ ಬೆಳ್ತಂಗಡಿ ಉಪ ವಿಭಾಗಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸಲಾಗುವುದು. ಸಾರ್ವಜನಿಕರು ದೂರವಾಣಿ ಮುಖಾಂತರ ಕೂಡ ಅಹವಾಲುಗಳನ್ನು ಸಲ್ಲಿಸಬಹುದು ಹಾಗೂ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸಹಾಯಕ ಕಾರ್ಯನಿವಾಕ ಇಂಜಿನಿಯರ್ ತಿಳಿಸಿದ್ದಾರೆ

Exit mobile version