Site icon Suddi Belthangady

ಉರುವಾಲು ಪದವಿನಲ್ಲಿ ರೈಂಬೋ ಬಾಲ ಶಿಬಿರ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ ಎಸ್ ಎಫ್) ಉರುವಾಲು ಪದವು ಸೆಕ್ಟರ್ ಸಮೀತಿ ವತಿಯಿಂದ ರೈಂಬೋ ವಿದ್ಯಾರ್ಥಿಗಳಿಗೆ ರೈಂಬೋ ಬಾಲ ಶಿಬಿರವನ್ನು ಉರುವಾಲು ಪದವು ಮದರಸ ಹಾಲ್ ನಲ್ಲಿ ನಡೆಸಲಾಯಿತು. ಉರುವಾಲು ಪದವು ಸೆಕ್ಟರ್ ಅಧ್ಯಕ್ಷರಾದ ಸಂಶುದ್ದೀನ್ ಹಿಮಮಿ ಅಧ್ಯಕ್ಷತೆಯನ್ನು ವಹಿಸಿದ್ದರು.

ಉರುವಾಲು ಪದವು ಜುಮಾ ಮಸೀದಿ ಖತೀಬರಾದ ಸುಲೈಮಾನ್ ಸಅದಿ ಉಸ್ತಾದರು ಉದ್ಘಾಟಿಸಿದರು. ಅಲ್ ಖಾದಿಸ ಕಾವಲಕಟ್ಟೆ ಇಲ್ಲಿಯ ಪ್ರಾಧ್ಯಾಪಕರಾದ ಸಾಜಿದ್ ಹಿಮಮಿ ಸಖಾಫಿ ಸಂಪನ್ಮೂಲ ವ್ಯಕ್ತಿಗಳಾಗಿ ತರಗತಿ ಮಂಡಿಸಿದರು.

ಉರುವಾಲು ಪದವು ಜಮಾಅತ್ ಕಮೀಟಿ ಅಧ್ಯಕ್ಷರಾದ ಹಮೀದ್ KV, ಎಸ್ಸೆಸ್ಸೆಫ್ ಉಪ್ಪಿನಂಗಡಿ ಡಿವಿಶನ್ ನಾಯಕರಾದ ಫಾರೂಕ್ ಸಅದಿ ಭಾಗವಹಿಸಿದ್ದರು.

Exit mobile version