Site icon Suddi Belthangady

ಕಾಂಗ್ರೆಸ್ ಸರಕಾರ ರಚನೆ ಹಿನ್ನಲೆ: ಅಳದಂಗಡಿಯಲ್ಲಿ ಸಂಭ್ರಮಾಚರಣೆ

ಅಳದಂಗಡಿ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ, ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯನವರು ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಅಳದಂಗಡಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.

ಪ್ರಮಾಣವಚನ ಸ್ವೀಕಾರದ ವೇಳೆಯ ಆಡಿಯೋ ಹಾಕುತ್ತಾ, ಕಾಂಗ್ರೆಸ್ ಪಕ್ಷಕ್ಕೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ,ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಜೈಕಾರ ಹಾಕಿದರು.

ಈ ವೇಳೆ ಅಳದಂಗಡಿ ಗ್ರಾ.ಪಂ.ಸದಸ್ಯ ಪ್ರಶಾಂತ್ ವೇಗಸ್,ಪ್ರಸಾದ್ ಪಿಂಟೋ,ಸತೀಶ್ ನಮನ, ಅಬ್ದುಲ್ ಖಾದರ್,ಶ್ರೀನಿವಾಸ ರಾವ್ , ವಿಶ್ವನಾಥ ಪೂಜಾರಿ, ಸತೀಶ್ ಮಿತ್ತಮಾರ್, ಲಿಯೋ ಪಿರೆರಾ, ಸಂತೋಷ್ ನಿನ್ನಿಕಲ್, ಸಂಜೀವ ಪೂಜಾರಿ ಕೊಡಂಗೆ, ಸುಭಾಶ್ಚಂದ್ರ ರೈ ಪಡ್ಯೋಡಿಗುತ್ತು, ಸದಾನಂದ ಆಚಾರ್ಯ, ಮುಂತಾದವರು ಉಪಸ್ಥಿತರಿದ್ದರು.

Exit mobile version