Site icon Suddi Belthangady

ಕಕ್ಕಿಂಜೆ: ಸಂಬಂಧಿಕರ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳ- ಹಲ್ಲೆ: ಮಂಗಳೂರು ಆಸ್ಪತ್ರೆಗೆ ದಾಖಲು

ಕಕ್ಕಿಂಜೆ: ಚಿಬಿದ್ರೆ ಗ್ರಾಮದ ಕಲ್ಲಗುಡ್ಡೆ ಮನೆ ನಿವಾಸಿ ಸಂಜೀವ ಮಲೆಕುಡಿಯ ಎಂಬವರ ಮೇಲೆ ಕ್ಷುಲ್ಲಕ ಕಾರಣಕ್ಕೆ ಅವರ ಸಂಬಂಧಿಕರೇ ಆದ ಇಬ್ಬರು ಯುವಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ.
ಸಂಜೀವ ಮಲೆಕುಡಿಯ ಅವರ ಮನೆಯಲ್ಲಿದ್ದ ಅವರ ತಂಗಿಯ ಮಗಳಿಗೆ ಯಾವುದೋ ಕಾರಣಕ್ಕೆ ಬೈದಿದ್ದಾರೆ ಆಕೆ ಇದನ್ನು ತನ್ನ ಸಂಬಂಧಿಕರಾದ ಧರ್ಮಸ್ಥಳ ಗ್ರಾಮದ ನಿವಾಸಿಗಳಾದ ಹರಿಪ್ರಸಾದ್ ಮತ್ತು ನವೀನ್ ಎಂಬವರಿಗೆ ಹೇಳಿದ್ದಾರೆ.ಅವರು ನೇರವಾಗಿ ಸಂಜೀವ ಮಲೆಕುಡಿಯ ಅವರ ಮನೆಗೆ ಬಂದು ಅವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.ಹಲ್ಲೆಗೆ ಒಳಗಾದ ಸಂಜೀವ ಮಲೆಕುಡಿಯ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು ಕೈಕಾಲುಗಳಿಗೂ ಗಾಯಗಳಾಗಿವೆ.ಮನೆಯವರು ಸಂಜೀವ ಮಲೆಕುಡಿಯ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version