Site icon Suddi Belthangady

ಪಿಲಿಗೂಡು ಚಾಮುಂಡೇಶ್ವರಿ ದೇವಿಗೆ ವಾರ್ಷಿಕ ಪರ್ವ ಪೂಜೆ

ಬೆಳ್ತಂಗಡಿ: ಪಿಲಿಗೂಡು ಶ್ರೀ ಚಾಮುಂಡೇಶ್ವರಿ ದೇವಾಸ್ಥಾನದ ವಾರ್ಷಿಕ ಪರ್ವ ಪೂಜೆಯು ಶ್ರೀ ಕೆ.ಎಂ ಸುಬ್ರಹ್ಮಣ್ಯ ಮುಚ್ಚಿನ್ನಾಯ ಅವರ‌ ವೈದಿಕ ನೇತೃತ್ವದಲ್ಲಿ ಮೇ.16 ರಂದು ಜರುಗಿತು.
ಚಾಮುಂಡೇಶ್ವರಿ ಭಜನಾ ಮಂಡಳಿ ಪಿಲಿಗೂಡಿನ ಭಕ್ತಿ ಹೆಜ್ಜೆ ಮಕ್ಕಳ ಪ್ರಥಮ ಭಜನಾ ಸೇವೆ ಇಂದು ನಡೆಯಿತು.ಸ್ಥಳ ಪರಿವಾರ ದೈವಗಳಾದ ಕಲ್ಲುರ್ಟಿ-ಪಂಜುರ್ಲಿ ಮತ್ತು ಗುಳಿಗ ದೈವಗಳಿಗೆ ಪರ್ವ ಸೇವೆಯು ನಡೆಯಿತು.ಬಳಿಕ ಅನ್ನಸಂತರ್ಪಣೆ ಸೇವೆ ನಡೆಯಿತು.

ಈ ಸಂದರ್ಭದಲ್ಲಿ ಭಜನಾ ತರಬೇತಿದಾರ ನಾಗೇಶ ಬಿ ನೆರಿಯ ಅವರನ್ನು ಸನ್ಮಾನಿಸಲಾಯಿತು. ಬಾಬು ಮೇಸ್ತ್ರಿ, ಪದ್ಮನಾಭ ಶಿಲ್ಪಿ ವೇಣೂರು, ಕಣಿಯೂರು ಗ್ರಾ.ಪಂ.ಸದಸ್ಯರುಗಳಾದ ಸೇಸಪ್ಪ ಮೂಲ್ಯ, ಪ್ರವೀಣ್ ಗೌಡ, ಯಶೋಧರ ಶೆಟ್ಟಿ, ಸುದ್ದಿ ಬಿಡುಗಡೆ ವಾರ ಪತ್ರಿಕೆ ವಿತರಕರು ಅಮ್ಮಿ ಪೂಜಾರಿ ಪಿಲಿಗೂಡು, ಭಾಸ್ಕರ ಗೌಡ ಬಲಕದಬೆಟ್ಟು, ಕಣಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರು ಸುನಂದ ದೋಲ, ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಮಹಾಲಕ್ಷ್ಮಿ ನಾಳೆ, ಭುವನೇಶ್ ಗುಂಪದಕಲ್ಲು, ಭಜನಾ ಮಂಡಳಿ ಸದಸ್ಯೆ ಸುನಂದ ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

Exit mobile version