Site icon Suddi Belthangady

ಬೆಳ್ತಂಗಡಿ ಘಟಕದ ಜಂಯತುಲ್ ಫಲಾಹ್ ಮಹಾಸಭೆ

ಬೆಳ್ತಂಗಡಿ: ಬೆಳ್ತಂಗಡಿ ಘಟಕದ ಜಂಯತುಲ್ ಫಲಾಹ್ ಮಹಾಸಭೆಯು ಘಟಕದ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರ ಅಧ್ಯಕ್ಷತೆಯಲ್ಲಿ ಘಟಕದ ಕಛೇರಿಯಲ್ಲಿ ಮೇ16ರಂದು ಜರುಗಿತು. ವೀಕ್ಷಕರಾಗಿ ಕೇಂದ್ರ ಸಮಿತಿಯಿಂದ ಮುಹಮ್ಮದ್ ಇಕ್ಬಾಲ್ ಅಬ್ದುಲ್ ಗಫೂರ್ ರವರು ಆಗಮಿಸಿ ಮಹಾಸಭೆ ನಡೆಸಿಕೊಟ್ಟರು.ಕಾರ್ಯದರ್ಶಿ ಅಬೂಬಕ್ಕರ್ ವರದಿ ವಾಚಿಸಿದರು.ಕೋಶಾಧಿಕಾರಿ ಕೆ ಎಸ್ ಅಬ್ದುಲ್ಲಾ ರವರು ಲೆಕ್ಕ ಪತ್ರ ಮಂಡಿಸಿದರು.ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್ ಸಾಹೇಬ್ ರವರು ಅಧ್ಯಕ್ಷೀಯ ಭಾಷಣ ಮಾಡಿ ತನ್ನ ಅವಧಿಯಲ್ಲಿ ತನ್ನೊಂದಿಗೆ ಸಕರಿಸಿದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹಜ್ ಯಾತ್ರೆಗೆ ತೆರಳಲಿರುವ ಆಲಿಯಬ್ಬ ಪುಲಾಬೆ ಹಾಗೂ ಶೇಕುಂಞ ಬೆಳ್ತಂಗಡಿ ಯವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.ಹಾಗೆಯೇ ಅಧ್ಯಕ್ಷ ಹುದ್ದೆಯಿಂದ ನಿವೃತ್ತಿಯಾಗಳಿರುವ ಅಬ್ದುಲ್ ಲತೀಫ್ ಸಾಹೇಬ್ ರನ್ನು ಸನ್ಮಾನಿಸಲಾಯಿತು.ಆದಂ ಸಾಹೇಬ್ ರವರು ಸ್ವಾಗತಿಸಿ ಧನ್ಯವಾದ ಸಲ್ಲಿಸಿದರು

Exit mobile version