Site icon Suddi Belthangady

ನೆರಿಯ ಬಿಜೆಪಿ ವಿಜಯೋತ್ಸವ- ಗಲಭೆ- ದೂರು ದಾಖಲು

ನೆರಿಯ: ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ವಿಜಯೋತ್ಸವದ ಹೆಸರಿನಲ್ಲಿ ಕಮಲಾಕ್ಷ ಗೌಡ ಎಂಬವರ ಮನೆಯ ಅಂಗಳಕ್ಕೆ ಪಟಾಕಿ ಸಿಡಿಸಿದನ್ನು ಪ್ರಶ್ನಿಸಿದಾಗ ಕಮಲಾಕ್ಷ ಗೌಡರಿಗೆ ಹಲ್ಲೆಗೆ ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಮುಂದಾಗಿರುವುದನ್ನು ತಡೆಯಲು ಬಂದ ಹೆಂಡತಿಯನ್ನು ಮೈಗೆ ಕೈಹಾಕಿ ದೂಡಿ ಹಾಕಿದ ಆರೋಪಿಗಳು ವೃತ್ತ ನಿರೀಕ್ಷಕರ ಕಛೇರಿಯಲ್ಲಿದ್ದರೂ ಬಿಟ್ಟಿರುವುದನ್ನು ವಿರೋಧಿಸಿ ವೃತ್ತ ನಿರೀಕ್ಷರ ವಾಹನವನ್ನು ತಡೆದು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವಕ್ತಾರ ಮನೋಹರ ಇಳಂತಿಲ, ಜಯವಿಕ್ರಮ ಕಲ್ಲಾಪು, ಸುಧೀರ್ ದೇವಾಡಿಗ, ಸುರೇಶ್ ಸುವರ್ಣ, ಪ್ರೀತಂ ಶೆಟ್ಟಿ ಉಜಿರೆ, ಸುದರ್ಶನ ಮಂಜಿಲ. ರಜತ್ ಗೌಡ, ಕಮಲಾಕ್ಷ ಗೌಡ, ರಾಘವೇಂದ್ರ ಗೌಡ ಹಾಗೂ ಇನ್ನಿತರ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Exit mobile version