Site icon Suddi Belthangady

ಬೆಳ್ತಂಗಡಿ ಕಲ್ಕಣಿ ಬಳಿ ಧರೆಗುರುಳಿದ ತೆಂಗಿನ ಮರ: ವಿದ್ಯುತ್ ಕಂಬಗಳಿಗೆ ಹಾನಿ

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಚರ್ಚ್ ರಸ್ತೆಯ ಕಲ್ಕಣಿ ಬಳಿ ತೆಂಗಿನ ಮರವೊಂದು ಧರೆಗುರುಳಿ ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಗಿದೆ.ಅದೃಷ್ಟವಶಾತ್ ತೆಂಗಿನ ಮರ ಪಕ್ಕದಲ್ಲೇ ಇದ್ದ ಮನೆಗೆ ಬೀಳದಿರುವುದರಿಂದ ಅಪಾಯವೊಂದು ತಪ್ಪಿದೆ. ತೆಂಗಿನ ಮರ ಬಿದ್ದು ಕೆಲ ವಿದ್ಯುತ್ ಕಂಬಗಳು ಕೂಡ ಧರೆಗುರುಳಿರುವುದರಿಂದ ಕಲ್ಕಣಿ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ.

Exit mobile version